ಕರ್ನಾಟಕ

karnataka

ETV Bharat / state

ಸಿಎಎ ಕಾಯ್ದೆ ಕುರಿತು ಬೂತ್​ ಮಟ್ಟದಲ್ಲಿ ಪ್ರಚಾರ: ಶಾಸಕ ಪಿ.ರಾಜೀವ್​​​ - ಬಿಜೆಪಿ ಶಾಸಕ ಪಿ.ರಾಜೀವ್

ಸಿಎಎ ಕಾಯ್ದೆ ಕುರಿತು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ತಿಳಿಸಿದ್ದಾರೆ.

MLA. P Rajeev
ಶಾಸಕ ಪಿ.ರಾಜೀವ್

By

Published : Jan 23, 2020, 2:33 PM IST

ಚಿಕ್ಕೋಡಿ: ಸಿಎಎ ಕಾಯ್ದೆ ಕುರಿತು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ತಿಳಿಸಿದ್ದಾರೆ.

ಶಾಸಕ ಪಿ.ರಾಜೀವ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ಯಾವುದೇ ಮುಸ್ಲಿಂರು ಪಾಕಿಸ್ತಾನವನ್ನು ಬೆಂಬಲಿಸುವುದಿಲ್ಲ. ಆದರೆ ಪಾಕಿಸ್ತಾನದ ಪರವಾಗಿ ನಿಂತಿರುವುದು ಕಾಂಗ್ರೆಸ್​. ಸಿಸಿಎ ಬಗ್ಗೆ ಬೆಳಗಾವಿ ಜಿಲ್ಲೆಯ 3985 ಬೂತ್​ಗಳಲ್ಲಿ ಆಂದೋಲನ ನಡೆಸಲಾಗುತ್ತದೆ. ಈ ಆಂದೋಲನದ ಪ್ರಕಾರ ಪ್ರತೀ ಬೂತ್ ಅಧ್ಯಕ್ಷರ ಮನೆಯ ಮೇಲೆ ಗಣರಾಜ್ಯೋತ್ಸವ ದಿನದಂದು ಭಾರತದ ರಾಷ್ಟ್ರಧ್ವಜ ಹಾರಿಸುತ್ತೇವೆ. ಪ್ರತೀ ಅಧ್ಯಕ್ಷರ ಮನೆಯಲ್ಲಿ ಭಾರತ ಮಾತೆಯ ಫೋಟೋ ಪೂಜೆ ಮಾಡಲಾಗುತ್ತದೆ ಎಂದರು. ಇದೇ ವೇಳೆ ಎನ್ಆರ್​ಸಿ ಮತ್ತು ಸಿಎಎ ಕಾಯ್ದೆ ಕುರಿತು ಗೊಂದಲ ಹುಟ್ಟಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ದೂರಿದರು.

ABOUT THE AUTHOR

...view details