ಕರ್ನಾಟಕ

karnataka

ETV Bharat / state

ಬಂಡಾಯ ಶಮನಕ್ಕೆ ಬಿಜೆಪಿ ಹರಸಾಹಸ: ಅಶೋಕ್ ಪೂಜಾರಿ ಮನೆಯಲ್ಲಿ ಗುಪ್ತ ಸಭೆ - ಅಶೋಕ ಪೂಜಾರಿ ಬಂಡಾಯ

ಗೋಕಾಕ್ ಉಪ ಚುನಾವಣೆ ಕಾವು ಸಾಕಷ್ಟು ರಾಜಕೀಯ ಹೈಡ್ರಾಮಾಗಳಿಗೆ ವೇದಿಕೆಯಾಗ್ತಿದೆ. ಅಶೋಕ ಪೂಜಾರಿ ಬಂಡಾಯ ಶಮನಕ್ಕೆ ಬಿಜೆಪಿ ಹರಸಾಹಸ ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಶೋಕ್ ಪೂಜಾರಿ ಮನೆಗೆ ಆಗಮಿಸಿ ಸಭೆ ನಡೆಸಿದರು.

BJP leaders meeting, ಬಿಜೆಪಿ ನಾಯಕರ ಸಭೆ

By

Published : Nov 16, 2019, 9:21 PM IST

Updated : Nov 16, 2019, 9:36 PM IST

ಗೋಕಾಕ : ರಾಜ್ಯ ರಾಜಕೀಯದಲ್ಲಿ ಕೇಂದ್ರಬಿಂದುವಾಗಿರುವ ಗೋಕಾಕ್ ಮತಕ್ಷೇತ್ರದ ಉಪಚುನಾವಣೆ ದಿನೇದಿನೇ ಕುತೂಹಲ ಮೂಡಿಸುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವ ಕೆಲಸ ಶುರುವಾಗಿದೆ.

ಇಂದು ಮಧ್ಯಾಹ್ನ ಅಶೋಕ ಪೂಜಾರಿ ಅವರು ಕಾರ್ಯಕರ್ತರ ಸಭೆ ನಡೆಸುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್​ ಅಂಗಡಿ, ಶಾಸಕರಾದ ಎ ಎಸ್ ಪಾಟೀಲ್(ನಡಹಳ್ಳಿ), ವಿಶ್ವನಾಥ್ ಪಾಟೀಲ್ ಸೇರಿದಂತೆ ಇತರರು ಅವರ ಮನೆಗೆ ಆಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದರು.

ಇಂದು ಅಶೋಕ ಪೂಜಾರಿ ಜೊತೆ ಸಭೆ ನಡೆಸಿದ ಬಿಜೆಪಿ ನಾಯಕರು

ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಅವರು ಅಶೋಕ ಪೂಜಾರಿ ಮನೆಗೆ ಆಗಮಿಸಿ ಸಭೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

Last Updated : Nov 16, 2019, 9:36 PM IST

ABOUT THE AUTHOR

...view details