ಕರ್ನಾಟಕ

karnataka

ETV Bharat / state

ಬೆಳಗಾವಿಗೆ 32KL ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಸಿಎಂಗೆ ಜಿಲ್ಲಾಧಿಕಾರಿ ಮನವಿ

ಸರ್ಕಾರದಿಂದ ಬೆಳಗಾವಿ ಜಿಲ್ಲೆಗೆ ಈಗಾಗಲೇ 23 ಕಿಲೋ ಲೀಟರ್‌ ಆಕ್ಸಿಜನ್ ಕೊಟ್ಟಿದ್ದಾರೆ. ಹೆಚ್ಚುವರಿಯಾಗಿ 32 ಕಿ.ಲೀ ಆಕ್ಸಿಜನ್ ನೀಡುವಂತೆ ಸಿಎಂ‌ ಅವರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

By

Published : May 18, 2021, 7:41 AM IST

Updated : May 18, 2021, 9:15 AM IST

ಡಿಸಿ ಎಂ.ಜಿ.ಹಿರೇಮಠ ಮನವಿ
ಡಿಸಿ ಎಂ.ಜಿ.ಹಿರೇಮಠ ಮನವಿ

ಬೆಳಗಾವಿ:ಜಿಲ್ಲೆಗೆ ಹೆಚ್ಚುವರಿಯಾಗಿ 32 ಕೆ.ಎಲ್‌ ಆಕ್ಸಿಜನ್ ನೀಡುವಂತೆ ಸಿಎಂ‌ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಸದ್ಯಕ್ಕೆ ಇರುವುದರಲ್ಲಿಯೇ ನಿರ್ವಹಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಹೆಚ್ಚುವರಿ ಆಮ್ಲಜನಕ ನೀಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಸಿಎಂಗೆ ಜಿಲ್ಲಾಧಿಕಾರಿ ಮನವಿ

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಿಎಂ ಜೊತೆಗಿನ ವಿಡಿಯೋ ಸಂವಾದದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ 24 ಕೋವಿಡ್ ಕೇರ್ ಸೆಂಟರ್​ಗಳಲ್ಲಿ 980 ಹಾಸಿಗೆಗಳಿವೆ. ಅದರಲ್ಲಿ ಕೇವಲ 81 ರೋಗಿಗಳು ಮಾತ್ರ ದಾಖಲಾಗಿದ್ದಾರೆ. ಹೀಗಾಗಿ ಹೆಚ್ಚೆಚ್ಚು ಜನರು ಬರುವಂತೆ ಎಲ್ಲರನ್ನೂ ಮನವೊಲಿಸಿ ಕೋವಿಡ್ ಕೇರ್ ಸೆಂಟರ್​ಗೆ ಬರುವಂತೆ ಮಾಡಬೇಕಿದೆ. ಇದರ ಜೊತೆಗೆ ಗ್ರಾಮೀಣ ಮಟ್ಟದಲ್ಲೂ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಹೀಗೆ ಮಾಡಿದಾಗ ಹಳ್ಳಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಲಿದೆ" ಎಂದರು.

"ಸರ್ಕಾರದಿಂದ ಬೆಳಗಾವಿ ಜಿಲ್ಲೆಗೆ ಈಗಾಗಲೇ 23 ಕೆ.ಎಲ್‌ ಆಕ್ಸಿಜನ್ ಕೊಟ್ಟಿದ್ದಾರೆ. ಹೆಚ್ಚುವರಿಯಾಗಿ 32 ಕೆ.ಎಲ್‌ ಆಕ್ಸಿಜನ್ ನೀಡುವಂತೆ ಸಿಎಂ‌ಗೆ ಮನವಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ" ಎಂದ ತಿಳಿಸಿದರು.

"ಲಾಕ್​ಡೌನ್​ ವಿಚಾರವಾಗಿ ಸಿಎಂ‌ ಯಾವುದೇ ಮಾಹಿತಿ ಕೇಳಿಲ್ಲ. ನಾವು ಆ ಬಗ್ಗೆ ಹೇಳಿಲ್ಲ. ಆದರೆ ಸರ್ಕಾರದ ಏನೇ ನಿರ್ಧಾರ ಬಂದ್ರೂ ಅದನ್ನು ಪಾಲಿಸುತ್ತೇವೆ. ಕೋವಿಡ್ ವಿಚಾರದಲ್ಲಿ ಸ್ವತಃ ನಿರ್ಣಯ ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ ಹತೋಟಿಗೆ ತರಲು ಸಕಲ ಪ್ರಯತ್ನ ಮಾಡಲಾಗುವುದು" ಎಂದರು.

Last Updated : May 18, 2021, 9:15 AM IST

ABOUT THE AUTHOR

...view details