ಕರ್ನಾಟಕ

karnataka

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕ‌ನ ಬರ್ಬರ ಹತ್ಯೆ.. ಘಟಪ್ರಭಾದಲ್ಲಿ ಹರಿದ ನೆತ್ತರು

By ETV Bharat Karnataka Team

Published : Sep 24, 2023, 9:14 PM IST

ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಯುವಕ‌ನ ಬರ್ಬರ ಹತ್ಯೆ
ಯುವಕ‌ನ ಬರ್ಬರ ಹತ್ಯೆ

ಬೆಳಗಾವಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ.

ರಾಯಬಾಗ ತಾಲೂಕಿನ ರೈಲ್ವೆ ಸ್ಟೇಷನ್ ನಿವಾಸಿ ಸಂಜಯ ಸಾಗರ ಕಾಂಬಳೆ (30) ಕೊಲೆಗೀಡಾದ ವ್ಯಕ್ತಿ. ಹಲವು ದಿನಗಳಿಂದ ಬುದ್ಧಿ ಮಾಂಧ್ಯನಂತೆ ವರ್ತಿಸುತ್ತಿದ್ದ ಈತನನ್ನು ಘಟಪ್ರಭಾದ ಅನುರಾಧಾ ಬಾರ್ ಹತ್ತಿರ ಕೊಲೆ ಮಾಡಲಾಗಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ಇದನ್ನೂ ಓದಿ:ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ.. ಬೀದರ್​ ಜಿಲ್ಲೆಯಲ್ಲಿ ಹರಿದ ನೆತ್ತರು

ABOUT THE AUTHOR

...view details