ಕರ್ನಾಟಕ

karnataka

ETV Bharat / state

10 ನಿಮಿಷ, ಅರ್ಧ ಗಂಟೆ,ಈಗ ಊಟದ ಸಮಯ! ಕಾಯಿಸಿ ಕಿರುಕುಳ ನೀಡಿದ ಬ್ಯಾಂಕ್ ಸಿಬ್ಬಂದಿ!

ಕಿತ್ತೂರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಹಾಗು ಗ್ರಾಹಕರೊಬ್ಬರ ನಡುವೆ ವಾಗ್ವಾದ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

By

Published : Jun 1, 2019, 7:46 PM IST

Updated : Jun 1, 2019, 7:51 PM IST

ಗ್ರಾಹಕನಿಗೆ ಕಾಯಿಸಿ, ಅವಾಜ್ ಹಾಕಿದ ಬ್ಯಾಂಕ್ ಸಿಬ್ಬಂದಿ

ಬೆಳಗಾವಿ: ಎರಡು ನಿಮಿಷದ ಕೆಲಸಕ್ಕೆ ಅರ್ಧಗಂಟೆ ಕಾಯಿಸಿದ್ದಾರೆಂದು ಆರೋಪಿಸಿರುವ ಬ್ಯಾಂಕ್ ಗ್ರಾಹಕ ಹಾಗು ಸಿಬ್ಬಂದಿ ನಡುವಿನ ಮಾತಿನ ಚಕಮಕಿ ನಡೆದಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಕಿತ್ತೂರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಈ ಘಟನೆ ನಡೆದಿದೆ.

ವೇತನದ ಚೆಕ್ ಸಂದಾಯ ಮಾಡಲು ಸುನೀಲ ನರಗುಂದ ಎಂಬವರು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಮೊದಲು 10 ನಿಮಿಷ ಕಾಯಿಸಿದ ಸಿಬ್ಬಂದಿ, ಕೆಲಸ ಇದೆ ಇನ್ನೂ ಅರ್ಧಗಂಟೆ ಕಾಯುವಂತೆ ಸೂಚಿಸಿದ್ದಾರೆ. ಗ್ರಾಹಕ ಅರ್ಧಗಂಟೆ ಕಾದು ಮತ್ತೆ ಚೆಕ್ ನೀಡಲು ಕೌಂಟರ್​ಗೆ ಹೋಗಿದ್ದಾರೆ. ಆಗ ಊಟದ ಸಮಯವಾಗಿದೆ, ಬಳಿಕ ಬನ್ನಿ ಎಂದ ಬ್ಯಾಂಕ್ ಸಿಬ್ಬಂದಿಯ ಹೇಳಿಕೆ ಸುನೀಲ ನರಂಗುದ ಸಿಟ್ಟಾಗಿದ್ದಾರೆ. ಈ ವೇಳೆ ಸುನೀಲ ಹಾಗೂ ಬ್ಯಾಂಕ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿದೆ

ಬ್ಯಾಂಕ್‌ ಸಿಬ್ಬಂದಿ ವರ್ತನೆಯನ್ನು ಸುನೀಲ ನರಗುಂದ ಅವರೇ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ರಾಹಕನನ್ನು ಕಾಯಿಸಿ, ಅವಾಜ್ ಹಾಕಿದ ಬ್ಯಾಂಕ್ ಸಿಬ್ಬಂದಿ
Last Updated : Jun 1, 2019, 7:51 PM IST

ABOUT THE AUTHOR

...view details