ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ವ್ಯಕ್ತಿ ಕಣ್ಣಿನೊಳಗೆ ಸೇರಿದ ಕಬ್ಬು.. ಮುಂದಾಗಿದ್ದೇನು? - belagavi athani news

ಅಪಘಾತದಲ್ಲಿ ಬೈಕ್ ಸವಾರನ ಕಣ್ಣಿಗೆ ಕಬ್ಬು ಹೊಕ್ಕಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಕಬ್ಬು ಹೊರ ತೆಗೆದಿರುವ ಘಟನೆ ಅಥಣಿಯ ನಂದಗಾಂವ​ ಗ್ರಾಮದಲ್ಲಿ ನಡೆದಿದೆ.

AGAT
ಅಪಘಾತದಲ್ಲಿ ಕಣ್ಣಿನ ಒಳಗೆ ಸೇರಿದ ಕಬ್ಬು

By

Published : Oct 27, 2020, 7:27 PM IST

ಅಥಣಿ (ಬೆಳಗಾವಿ): ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಸವಾರನ ಕಣ್ಣಿನೊಳಗೆ ಕಬ್ಬು ಸೇರಿರುವ ಘಟನೆ ತಾಲೂಕಿನ ನಂದಗಾಂವ್​ ಗ್ರಾಮದಲ್ಲಿ ನಡೆದಿದೆ.

ಅಜಿತ್ ಸಕಲ್ಕನವರ್ ಎಂಬ ಯುವಕನ ಕಣ್ಣಿಗೆ ಕಬ್ಬು ಸೇರಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸೇರಿಸಿ, ಕಣ್ಣಿನೊಳಗೆ ಹೊಕ್ಕಿದ್ದ ಮೂರು ಇಂಚಿನ ಕಬ್ಬನ್ನು ವೈದ್ಯರು ಹೊರ ತೆಗೆದಿದ್ದಾರೆ.

ಅಪಘಾತದಲ್ಲಿ ಕಣ್ಣಿನೊಳಗೆ ಸೇರಿದ್ದ ಕಬ್ಬನ್ನು ಹೊರ ತೆಗೆದ ವೈದ್ಯ

ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬಿನ ಹಂಗಾಮು ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ.

ABOUT THE AUTHOR

...view details