ಕರ್ನಾಟಕ

karnataka

ETV Bharat / state

ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಮದುವೆಯಾದ ಪೊಲೀಸ್​​ ಕಾನ್ಸ್​​ಟೆಬಲ್​​.. - Athani

ಅಥಣಿಯ ಜನವಾಡ ಗ್ರಾಮದ ನಿವಾಸಿಯಾದ ರಾಮು ಸದಾಶಿವ ಕಾಂಬಳೆ ಎಂಬ ಪೊಲೀಸ್​​ ಕಾನ್ಸ್​​ಟೆಬಲ್ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಪ್ತಪದಿ ತುಳಿದಿದ್ದಾರೆ.

Athani
ಪೊಲೀಸ್​ ಕಾನ್ಸ್​​ಟೆಬಲ್​​ ರಾಮು ಸದಾಶಿವ ಕಾಂಬಳೆ ಮದುವೆ

By

Published : May 30, 2020, 8:37 AM IST

Updated : May 30, 2020, 2:10 PM IST

ಅಥಣಿ:ತಾಲೂಕಿನ ಜನವಾಡ ಗ್ರಾಮದ ನಿವಾಸಿಯಾದ ರಾಮು ಸದಾಶಿವ ಕಾಂಬಳೆ ಎಂಬ ಪೊಲೀಸ್​​ ಕಾನ್ಸ್​ಟೆಬಲ್​​ ಜನವಾಡ ಗ್ರಾಮದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮುಡಿಸುವುದರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ತಾಲೂಕಿನ ಜನವಾಡ ಗ್ರಾಮದ ನಿವಾಸಿಯಾದ ರಾಮು ಸದಾಶಿವ ಕಾಂಬಳೆ-ದೀಪಾ ಕಾಂಬಳೆ ಈ ಜಾಗೃತಿ ಮೂಡಿಸಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ ಸುರಕ್ಷಿತವಾಗಿರಿ, ಜೀವನ ಅಮೂಲ್ಯವಾದದ್ದು. ಮಾಸ್ಕ್​​ ಹಾಗೂ ಸ್ಯಾನಿಟೈಸರ್ ಸಮರ್ಪಕವಾಗಿ ಬಳಸಿ ಎಂಬ ಘೋಷಣೆ ಬರೆದ ಪೋಸ್ಟರ್​​ ಹಿಡಿದುಕೊಂಡಿದ್ದು ವಿಶೇಷ.

ಬೆಂಗಳೂರಿನ ಬೆಳಂದೂರು ಪೊಲೀಸ್​​ ಠಾಣೆಯಲ್ಲಿ ಕಾನ್ಸ್​​ಟೆಬಲ್ ಆಗಿ​​ ಕಾರ್ಯನಿರ್ವಹಿಸುತ್ತಿರುವ ರಾಮು ಕಾಂಬಳೆ ಕೊರೊನಾ ಬಂದ ಸಂದರ್ಭದಲ್ಲಿ ಬೆಂಗಳೂರಿನ ಪೊಲೀಸ್​​ ಠಾಣೆಯಲ್ಲಿ ಅವಿರತವಾಗಿ ಸೇವೆಯನ್ನು ಸಲ್ಲಿಸಿದ್ದರು. ಮೊದಲೇ ನಿಶ್ಚಯವಾದ ದಿನಾಂಕದಂದು ಮದುವೆ ಮಾಡಿಕೊಂಡಿದ್ದು, ಮದುವೆಯ ಎಲ್ಲಾ ಕಾರ್ಯದಲ್ಲಿಯೂ ಕೂಡ ಎಲ್ಲರಿಗೂ ಸಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹೇಳಿದ್ದಾರೆ. ಇನ್ನು ಸ್ಯಾನಿಟೈಜರ್​​ನ್ನು ಕೂಡ ಎಲ್ಲಾ ಕಡೆ ಬಳಸಿ ಎಂಬ ಸಲಹೆ ನೀಡಿ ಊರಿನ ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ.

Last Updated : May 30, 2020, 2:10 PM IST

ABOUT THE AUTHOR

...view details