ಕರ್ನಾಟಕ

karnataka

By

Published : Apr 30, 2021, 4:53 PM IST

Updated : Apr 30, 2021, 5:26 PM IST

ETV Bharat / state

ಕೋವಿಡ್ ‌ಹೆಸರಲ್ಲಿ ಹಣ ಪೀಕುತ್ತಿರುವ ಆ್ಯಂಬುಲೆನ್ಸ್​ ಚಾಲಕರು

ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನಲ್ಲಿ ಕೆಲವು ಆ್ಯಂಬುಲೆನ್ಸ್​ ಚಾಲಕರು ಕೋವಿಡ್​ನಿಂದ ಸಾವನ್ನಪ್ಪಿದವರ ಶವಗಳನ್ನು ಸಾಗಿಸಲು ಸಾವಿರ ಸಾವಿರ ರೂ. ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ambulance driver
ambulance driver

ಬೆಳಗಾವಿ: ಕೊರೊನಾ ವೈರಸ್ ಅಟ್ಟಹಾಸವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವೊಂದಿಷ್ಟು ಆ್ಯಂಬುಲೆನ್ಸ್​ ಚಾಲಕರು ಪ್ರತಿ ವಾಹನಕ್ಕೆ 3ರಿಂದ 5ಸಾವಿರದವರೆಗೆ ಹಣ ಪೀಕುತ್ತಿರುವ ಆರೋಪ ಕೇಳಿ ಬಂದಿದೆ.

ಗೋಕಾಕ್​ ತಾಲೂಕಿನ ಕೊಣ್ಣೂರು ಗ್ರಾಮದ 36 ವರ್ಷದ ವ್ಯಕ್ತಿಯೊಬ್ಬರು ಕೋವಿಡ್​​ನಿಂದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದರು. ಆ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಮೂರು ಸಾವಿರ ರೂ. ತೆಗೆದುಕೊಂಡರು. ಹೀಗಾಗಿ ಕೊರೊನಾ ಸಂಕಷ್ಟದ ಸಮಯದಲ್ಲೂ ಕೆಲವೊಂದಿಷ್ಟು ಜನರು ಮಾನವೀಯತೆ ಮರೆತಿದ್ದಾರೆಯೇ ಅನ್ನೋ ಪ್ರಶ್ನೆ ಮೂಡುತ್ತಿದೆ.

ಕೋವಿಡ್ ‌ಹೆಸರಲ್ಲಿ ಹಣ ಪೀಕುತ್ತಿರುವ ಆ್ಯಂಬುಲೆನ್ಸ್​ ಚಾಲಕರು

ಇದಲ್ಲದೇ ಕೋವಿಡ್​ನಿಂದ ಮೃತಪಟ್ಟ ಶವವನ್ನು ಸ್ಮಶಾನಕ್ಕೆ ಸಾಗಣೆ ಮಾಡುವುದಕ್ಕಾಗಿಯೇ ಮೃತನ ಸಂಬಂಧಿಕರಿಂದ ಸಾವಿರಾರು ರೂ. ಪಡೆಯುತ್ತಿರೋ ಆರೋಪಗಳು ಮೊದಲಿನಿಂದಲೂ ಬೆಳಕಿಗೆ ಬರುತ್ತಿದೆ. ಆದರೂ ಜಿಲ್ಲಾಡಳಿತ ಮಾತ್ರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಜಿಲ್ಲಾಡಳಿತ ಕೋವಿಡ್​ನಿಂದ ಸಾವನ್ನಪ್ಪಿದವರ ಕುಟುಂಬಸ್ಥರ ನೋವಿನೊಂದಿಗೆ ಇರಬೇಕು. ಕೊರೊನಾ ವೈರಸ್​ ಅನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಂಬುಲೆನ್ಸ್​ ಚಾಲಕರು ಸೇರಿದಂತೆ ಇತರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.

Last Updated : Apr 30, 2021, 5:26 PM IST

ABOUT THE AUTHOR

...view details