ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಮಿತ್ರ ಮಂಡಳಿ ಸಭೆ : ಹೆಚ್.ವಿಶ್ವನಾಥ್ ಜತೆ ನಾನಿರುತ್ತೇನೆ ಎಂದ ಸಾಹುಕಾರ - ವಿಶ್ವನಾಥ್ ಪರ ರಮೇಶ್ ಜಾರಕಿಹೊಳಿ ಬ್ಯಾಟಿಂಗ್

ಮಿತ್ರ ಮಂಡಳಿ ಸಭೆ ಕರೆದು ಚರ್ಚೆ ಮಾಡುತ್ತೇವೆ. ನಮ್ಮಲ್ಲಿ ಒಬ್ಬರಿಗೆ ಅನ್ಯಾಯ ಆಗಿರುವ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಸೇರುತ್ತೇವೆ..

ishwanath
ಶೀಘ್ರದಲ್ಲೇ ಮಿತ್ರ ಮಂಡಳಿ ಸಭೆ

By

Published : Nov 30, 2020, 5:54 PM IST

ಬೆಳಗಾವಿ :ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದಕ್ಕೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಹೆಚ್‌ ವಿಶ್ವನಾಥ್ ಪ್ರಕರಣದಲ್ಲಿ ಏನು ತೀರ್ಪು ಬಂದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.

ಕಾನೂನು ತಜ್ಞರ ಜತೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಕಳೆದ ಡಿಸೆಂಬರ್​ನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಸ್ಪೀಕರ್ ಅವರ ತೀರ್ಪಿನ ಬಗ್ಗೆ ಕೊನೆ ಗಳಿಗೆಯಲ್ಲಿ ಆರ್ಡರ್ ಆಯಿತು.

ಹೆಚ್.ವಿಶ್ವನಾಥ್ ಬೆನ್ನಿಗೆ ನಿಂತ ಬೆಳಗಾವಿ ಸಾಹುಕಾರ

ಈ ಕಾರಣಕ್ಕೆ ನಾವು ಮೇಲ್ಮನವಿ ಸಲ್ಲಿಸಲಿಲ್ಲ. ಮಧ್ಯಂತರ ಆದೇಶದ ಬಗ್ಗೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ತೇವೆ.

ಶೀಘ್ರದಲ್ಲೇ ಮಿತ್ರ ಮಂಡಳಿ ಸಭೆ ಕರೆದು ಚರ್ಚೆ ಮಾಡುತ್ತೇವೆ. ನಮ್ಮಲ್ಲಿ ಒಬ್ಬರಿಗೆ ಅನ್ಯಾಯ ಆಗಿರುವ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಸೇರುತ್ತೇವೆ. ಹೆಚ್‌ ವಿಶ್ವನಾಥ್ ಜತೆಗೆ ನಾನಿರುತ್ತೇನೆ ಎಂದು ಭರವಸೆ ನೀಡಿದರು.

ABOUT THE AUTHOR

...view details