ಕರ್ನಾಟಕ

karnataka

By

Published : Sep 23, 2021, 4:08 PM IST

ETV Bharat / state

ಕುಕ್ಕರ್ ತಗೋರಿ, ಸೀರೆ ತಗೋರಿ, ನಡಾ ಮುರ್ಕೋರಿ..: ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ

ಕುಕ್ಕರ್ ತಗೋರಿ, ಸೀರೆ ತಗೋರಿ, ಮತ ಹರಾಜ್ ಹಾಕ್ರಿ.. ಬೋನಸ್ ಅಂತಾ ನಿಮಗ ರಸ್ತೆ ಗುಂಡಿ ಸಿಗ್ತಾವ್, ಬಿದ್ದು ನಡಾ ಮುರ್ಕೋರಿ. 30 ಪರ್ಸೆಂಟ್ ಕಮಿಷನ್ ಪಡೆದು ಅಕ್ಕಾ ರಸ್ತೆ ಮಾಡ್ತಿದ್ದಾರಂತ. ಹೊಸ ರಸ್ತೆಗಳಲ್ಲೆವೂ ಕಳಪೆಯಿಂದ ಕೂಡಿದ್ದು, ಮತ ಹಾಕಿ ಈಗ ಹೊಯ್ಕಂತ ಕುಂದರ್ರೀ.. ಎಂದು ಬ್ಯಾನರ್‌ಗಳನ್ನು ಹಾಕುವ ಮೂಲಕ ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

Lakshmi Hebbalkar
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ:ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಶೇ 30ರಷ್ಟು ಕಮಿಷನ್​ ಆರೋಪ ಕೇಳಿ ಬಂದಿದೆ.

ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್​ ಹಾಕಿ ವ್ಯಂಗ್ಯ

ಗ್ರಾಮೀಣ ಕ್ಷೇತ್ರದಲ್ಲಿ ಬರುವ ಬೆಳಗುಂದಿ, ತಾರಿಹಾಳ, ಉಚಗಾಂವ ಗ್ರಾಮದಲ್ಲಿ ಕಳಪೆ ಕಾಮಗಾರಿಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಹೀಗಾಗಿ, ಕ್ಷೇತ್ರದಾದ್ಯಂತ ಸ್ಥಳೀಯ ಶಾಸಕಿ ವಿರುದ್ಧ ಅಪರಿಚಿತರು ಬ್ಯಾನರ್ ಅಂಟಿಸಿದ್ದಾರೆ. ಕನ್ನಡ, ಮರಾಠಿ ಭಾಷೆಯ ಬ್ಯಾನರ್​ನಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕುಕ್ಕರ್ ತಗೋರಿ, ಸೀರೆ ತಗೋರಿ, ಮತ ಹರಾಜ್ ಹಾಕ್ರಿ. ಬೋನಸ್ ಅಂತಾ ನಿಮಗ ರಸ್ತೆ ಗುಂಡಿ ಸಿಗ್ತಾವ್, ಬಿದ್ದು ನಡಾ ಮುರ್ಕೋರಿ. 30 ಪರ್ಸೆಂಟ್ ಕಮಿಷನ್ ಪಡೆದು ಅಕ್ಕಾ ರಸ್ತೆ ಮಾಡ್ತಿದ್ದಾರಂತ. ಹೊಸ ರಸ್ತೆಗಳೆಲ್ಲವೂ ಕಳಪೆಯಿಂದ ಕೂಡಿದ್ದು, ಮತ ಹಾಕಿ ಈಗ ಹೊಯ್ಕಂತ ಕುಂದರ್ರೀ.. ಎಂದು ಈ ಬ್ಯಾನರ್‌ಗಳಲ್ಲಿ ಹೆಬ್ಬಾಳ್ಕರ್ ವಿರುದ್ಧ ವ್ಯಂಗ್ಯಾತ್ಮಕವಾಗಿ ಬರೆಯಲಾಗಿದೆ.

ಇದನ್ನೂಓದಿ:ಮನೆಯ ಮೇಲ್ಚಾವಣಿ ಕುಸಿತ: ಮಣ್ಣಿನಡಿ ಸಿಲುಕಿದ್ದ ವೃದ್ಧೆಯ ರಕ್ಷಣೆ

ABOUT THE AUTHOR

...view details