ಕರ್ನಾಟಕ

karnataka

ETV Bharat / state

ಕೇಳ್ರಪ್ಪೋ ಕೇಳಿ, ಭರಪೂರ ನೀರ್​ ಬಿಟ್ಟಾರ... ಗ್ರಾಮಗಳನ್ನ ತೊರೆಯುವಂತೆ ಮಾರ್ಧನಿಸಿತು ಡಂಗೂರ - mangavati

ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮಕ್ಕೆ ಭೇಟಿ ನೀಡಿದ್ದ ಕಾಗವಾಡ ತಹಶಿಲ್ದಾರ್​ ಪ್ರವಾಹ ಹಿನ್ನೆಲೆ ಗ್ರಾಮಗಳಿಂದ ಸ್ಥಳಾಂತರವಾಗುವಂತೆ ಜನತೆಗೆ ಡಂಗೂರ ಸಾರಿಸುವ ಮೂಲಕ ಮನವಿ ಮಾಡಿದ್ರು.

ಕೃಷ್ಣಾನದಿ ತೀರದ ಜನರಿಗೆ ಗ್ರಾಮಗಳನ್ನು ಬಿಡುವಂತೆ ಕಾಗವಾಡ ತಹಶೀಲ್ದಾರ್ ಮನವಿ

By

Published : Sep 6, 2019, 8:57 PM IST

ಚಿಕ್ಕೋಡಿ:ಮರಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಗೆ ನೀರನ್ನು ಹರಿಬಿಡಲಾಗಿದೆ. ಹೀಗಾಗಿ ನದಿಪಾತ್ರದ ಜನರಿಗೆ ಗ್ರಾಮಗಳನ್ನು ತೊರೆಯುವಂತೆ ಕಾಗವಾಡ ತಹಶಿಲ್ದಾರ್ ಪ್ರಮೀಳಾ ದೇಶಪಾಂಡೆ ಮನವಿ ಮಾಡಿದ್ದಾರೆ.

ಕೃಷ್ಣಾನದಿ ತೀರದ ಜನರಿಗೆ ಗ್ರಾಮಗಳನ್ನು ತೊರೆಯುವಂತೆ ಕಾಗವಾಡ ತಹಶಿಲ್ದಾರ್ ಮನವಿ

ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಡಂಗೂರ ಸಾರುವ ಮೂಲಕ ಜನರಲ್ಲಿ ಮನವಿ ಮಾಡಿದ್ರು. 15 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಈ ಗ್ರಾಮದ ಜನರು ತಮ್ಮ ತಮ್ಮ ಬೀಗರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಆದರೆ ಈಗ ಎಲ್ಲಿಗೆ ಹೋಗುವುದು ಎಂದು ಜನರು ಕೇಳಿದ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸಿದ ತಕಶಿಲ್ದಾರ್ ಪ್ರಮೀಳಾ ಅವರು ಸರ್ಕಾರದ ಆದೇಶ ಬಂದರೆ ಗಂಜಿ ಕೇಂದ್ರ ತೆರೆಯಲಾಗುವುದು. ಅಲ್ಲಿಯವರೆಗೂ ನೀವು ಸುರಕ್ಷಿತ ಸ್ಥಳಗಳಿಗೆ ತೆರಳಲೇಬೇಕು ಎಂದು ಮನವಿ ಮಾಡಿದ್ರು. ಗ್ರಾಮಗಳಲ್ಲಿ ಡಂಗೂರ ಸಾರುವ ಮುಖಾಂತರ ಊರು ಬಿಟ್ಟು ತೆರಳುವಂತೆ ಡಂಗೂರ ಸಾರಲಾಯಿತು.

ABOUT THE AUTHOR

...view details