ಕರ್ನಾಟಕ

karnataka

By

Published : Jul 12, 2020, 6:47 PM IST

ETV Bharat / state

ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಆಲದ ಮರಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A young man commits suicide by hanging himself on a banyan tree
ಆಲದ ಮರಕ್ಕೆ ಯುವಕ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಚಿಕ್ಕೋಡಿ: ಸಾರಾಯಿ ಕುಡಿದ ನಶೆಯಲ್ಲಿ ಆಲದ ಮರಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ದನಗಳ ಪೇಟೆಯಲ್ಲಿ ನಡೆದಿದೆ.

ನಾಗನೂರ ಗ್ರಾಮದ ಹಣಮಂತ ಯಮನಪ್ಪ ನಾಯಕ (22) ಮೃತ ಯುವಕನಾಗಿದ್ದು,‌ ಈತ ತೆಂಗಿನ ಎಳೆ ನೀರು ವ್ಯಾಪಾರಿಯಾಗಿದ್ದ. ಶನಿವಾರ ರಾತ್ರಿ ಮನೆಯಲ್ಲಿ ತೆಂಗಿನ ಎಳೆ ನೀರು ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವನು, ಮೂಡಲಗಿ ಎಪಿಎಂಸಿ ಆವರಣದ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಆತನ ಕಾಲು ನೆಲಕ್ಕೆ ತಾಗಿದ್ದರಿಂದ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನಗಳು ಜನರಲ್ಲಿ ವ್ಯಕ್ತವಾಗಿವೆ. ಈ ಕುರಿತು ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details