ಚಿಕ್ಕೋಡಿ: ಹಾಡು ಹಗಲೇ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ತಿಜೋರಿ ಒಡೆದು ದರೋಡೆ ಮಾಡಿರುವ ಘಟನೆ ತಾಲೂಕಿನ ಸದಲಗಾದಲ್ಲಿ ನಡೆದಿದೆ.
ಬೀಗ ಮುರಿದು ಹಾಡು ಹಗಲೇ ಮನೆಗಳ್ಳತನ - ಖದೀಮರು
ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ಬಾಗಿಲನ್ನು ಮುರಿದು ಒಳನುಗ್ಗಿದ ಖದೀಮರು 185 ಗ್ರಾಂ ಬಂಗಾರ ಎಗರಿಸಿಕೊಂಡು ಪರರಾಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![ಬೀಗ ಮುರಿದು ಹಾಡು ಹಗಲೇ ಮನೆಗಳ್ಳತನ](https://etvbharatimages.akamaized.net/etvbharat/prod-images/768-512-3135319-thumbnail-3x2-ckd.jpg)
ಬೀಗ ಮುರಿದು ಹಾಡ ಹಗಲೇ ಮನೆಗಳ್ಳತನ
ಸಕಾರಾಮ್ ರಾಮಚಂದ್ರ ಧನವಾಡೆ ಎಂಬುವರ ಮನೆಯ ಹಿಂದಿನ ಬಾಗಿಲು ಮುರಿದ ಖದೀಮರು, 185 ಗ್ರಾಂ ಬಂಗಾರ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುವನ್ನು(ಸುಮಾರು 4,62,500 ಮೊತ್ತ) ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಕಾರಾಮ್ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.