ಕರ್ನಾಟಕ

karnataka

ETV Bharat / state

10 ಕೋಟಿ ರೂ. ವೆಚ್ಚದಲ್ಲಿ 13 ಬ್ಯಾರೇಜ್ ಕಂ ಬಾಂದಾರ ನಿರ್ಮಾಣ; ಮಹಾಂತೇಶ ಕವಟಗಿಮಠ - Mahantesh Kavatagimath latest news

ರೈತರ ಅನುಕೂಲಕ್ಕಾಗಿ ಈಗಾಗಲೇ 13 ಬ್ಯಾರೇಜ್ ಕಂ ಬಾಂದಾರ ನಿರ್ಮಿಸಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ 100 ಬ್ಯಾರೇಜ್ ಕಂ ಬಾಂದಾರ ನಿರ್ಮಿಸುವ ಗುರಿ ಇದೆ..

13 bridge cum barrage construction in 10 crore ; Mahantesh Kavatagimatha
ಮಹಾಂತೇಶ ಕವಟಗಿಮಠ

By

Published : Nov 13, 2020, 5:51 PM IST

Updated : Nov 13, 2020, 6:42 PM IST

ಚಿಕ್ಕೋಡಿ: ಮಳೆ ನೀರು ಹರಿದು ನದಿ ಸೇರುವ ಬದಲು ಹರಿಯುವ ನೀರನ್ನು ತಡೆಯಲು ಖಾನಾಪೂರ ಹಾಗೂ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ 13 ಬ್ಯಾರೇಜ್ ಕಂ ಬಾಂದಾರ ನಿರ್ಮಿಸಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.

ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಿರ್ಮಿಸಿರುವ ಬ್ಯಾರೇಜ್ ಕಂ ಬಾಂದಾರ ಭರ್ತಿಯಾಗಿರುವ ಹಿನ್ನೆಲ್ಲೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಈಗಾಗಲೇ 13 ಬ್ಯಾರೇಜ್ ಕಂ ಬಾಂದಾರ ನಿರ್ಮಿಸಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ 100 ಬ್ಯಾರೇಜ್ ಕಂ ಬಾಂದಾರ ನಿರ್ಮಿಸುವ ಗುರಿ ಇದೆ.

ಹನಿ ನೀರನ್ನು ಸದುಪಯೋಗ ಮಾಡಿಕೊಳ್ಳುವ ಪ್ರವೃತ್ತಿ ನಮ್ಮ ಯುವ ಜನರಲ್ಲಿ ಆಸಕ್ತಿ ಬರಬೇಕು. ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ತಡೆಹಿಡಿಯುವ ಮೂಲಕ ಕೊಳವೆ ಬಾವಿಯ ಅಂತರ್ಜಲಮಟ್ಟ ಹೆಚ್ಚಿಸಲು ಹಳ್ಳಕ್ಕೆ ಅಲ್ಲಲ್ಲಿ ಬ್ಯಾರೇಜ್​ ನಿರ್ಮಾಣ ಮಾಡಲಾಗಿದೆ ಎಂದರು.

ಬ್ಯಾರೇಜ್ ಕಂ ಬಾಂದಾರ ನಿರ್ಮಾಣಕ್ಕೆ ಚಾಲನೆ

ಚಿಕ್ಕೋಡಿ-ಸದಲಗಾ ಮತಕ್ಷೇತ್ರದಲ್ಲಿ ಶಾಶ್ವತ ಕಾಮಗಾರಿ ಮಾಡಿದಾಗ ಮಾತ್ರ ರೈತರ ಸೇವೆ ಮಾಡಿದಂತಾಗುತ್ತದೆ ಎಂದು ಇದೇ ವೇಳೆ ಪರೋಕ್ಷವಾಗಿ ಸ್ಥಳೀಯ ಶಾಸಕರ ವಿರುದ್ಧ ಕವಟಗಿಮಠ ಹರಿಹಾಯ್ದರು.

Last Updated : Nov 13, 2020, 6:42 PM IST

ABOUT THE AUTHOR

...view details