ಚಿಕ್ಕೋಡಿ: ಕೊರೊನಾ ವೈರಸ್ ತಡೆಗಟ್ಟಲು ಹಲವಾರು ಸಂಘಟನೆಗಳು, ಸಂಘಸಂಸ್ಥೆಗಳು ಸಹಾಯ ಹಸ್ತ ಚಾಚುತ್ತಿವೆ. ಅದರಂತೆ ಬೆಳಗಾವಿ ಜಿಲ್ಲೆಯ ಮಧ್ಯವರ್ತಿ ಬ್ಯಾಂಕಿನ ಆಡಳಿತ ಮಂಡಳಿಯವರು ಸಿಎಂ ಕೊರೊನಾ ಪರಿಹಾರ ನಿಧಿಗೆ 1 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.
ಸಿಎಂ ಪರಿಹಾರ ನಿಧಿಗೆ 1 ಕೋಟಿ ಮಂಜೂರು: ರಮೇಶ್ ಕತ್ತಿ - ಕೊರೊನಾ ವೈರಸ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ದೇಶದ ಭವಿಷ್ಯ ನಮ್ಮ ಕೈಲಿದೆ, ಅರ್ಥ ಮಾಡಕೊಳ್ಳಿ. ನಮಗಾಗಿ ಅಧಿಕಾರಿಗಳು ತಮ್ಮ ಮನೆ, ಮಕ್ಕಳನ್ನ ಬಿಟ್ಟು ಹಗಲು -ರಾತ್ರಿ ದುಡಿಯುತ್ತಿದ್ದಾರೆ ಎಂದು ರಮೇಶ್ ಕತ್ತಿ, ಕೊರೊನಾ ಯೋಧರ ಗುಣಗಾನ ಮಾಡಿದರು.
![ಸಿಎಂ ಪರಿಹಾರ ನಿಧಿಗೆ 1 ಕೋಟಿ ಮಂಜೂರು: ರಮೇಶ್ ಕತ್ತಿ ರಮೇಶ್ ಕತ್ತಿ](https://etvbharatimages.akamaized.net/etvbharat/prod-images/768-512-6852363-1097-6852363-1587279876574.jpg)
ಹುಕ್ಕೇರಿ ತಾಲೂಕಿನ ಬಾಗೇವಾಡಿ ಕಚೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ದೇಶದ ಭವಿಷ್ಯ ನಮ್ಮ ಕೈಲಿದೆ, ಅರ್ಥ ಮಾಡಕೊಳ್ಳಿ. ನಮಗಾಗಿ ಅಧಿಕಾರಿಗಳು ತಮ್ಮ ಮನೆ, ಮಕ್ಕಳನ್ನ ಬಿಟ್ಟು ಹಗಲು -ರಾತ್ರಿ ದುಡಿಯುತ್ತಿದ್ದಾರೆ. ನಾವು ಅರ್ಥ ಮಾಡಿಕೊಳ್ಳದೆ ಇದ್ದರೆ ದೇಶವನ್ನು, ನಮ್ಮನ್ನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಕೊರೊನಾ ವೈರಸ್ ಕೂಡಲೇ ಪತ್ತೆ ಹಚ್ಚಲು ಮುಂದಾಗಿದೆ. ಅದರಂತೆ ಲ್ಯಾಬ್ನ್ನು ಬೆಳಗಾವಿ ಜಿಲ್ಲೆಗೆ ಮಂಜೂರು ಮಾಡಿದ್ದಾರೆ. ಇನ್ನೇನು ನಾಲ್ಕಾರು ದಿನಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ ಈ ಆಸ್ಪತ್ರೆಗೆ ಏನಾದರೂ ಸಹಾಯ ಸಹಕಾರ ಬೇಕಾದರ ಮಧ್ಯವರ್ತಿ ಬ್ಯಾಂಕ್ನಿಂದ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.