ಕರ್ನಾಟಕ

karnataka

ETV Bharat / state

ಪೊಲೀಸರಿಗೆ ಹಿಡಿದು ಕೊಟ್ಟಿದ್ದಕ್ಕೆ ಕೋಪ: ಬೇಲ್ ಮೇಲೆ ಬಂದು ಪ್ರೇಯಸಿಯ ಸ್ಕೂಟಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ

ಜೈಲಿಗೆ ಹೋಗಲು ಪ್ರೀತಿಸಿದ ಯುವತಿಯೇ ಕಾರಣ ಎಂದು ಆಕೆಯ ಸ್ಕೂಟರ್​ಗೆ ಪಾಗಲ್ ಪ್ರೇಮಿ ಬೆಂಕಿ ಹಚ್ಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

By

Published : Dec 15, 2022, 1:18 PM IST

ಪ್ರೀತಿಸಿದ ಹುಡುಗಿಯ ಸ್ಕೂಟಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ
ಪ್ರೀತಿಸಿದ ಹುಡುಗಿಯ ಸ್ಕೂಟಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ

ಬೆಂಗಳೂರು: ತಾನು ಜೈಲಿಗೆ ಹೋಗಲು ಪ್ರೀತಿಸಿದ ಹುಡುಗಿಯೇ ಕಾರಣ ಎಂದು ಯುವತಿ ಮೇಲಿನ ಕೋಪಕ್ಕೆ ಆಕೆಯ ಸ್ಕೂಟರ್​ಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಕ್ರಂ ಬಂಧಿತ ಯುವಕ.

ಡಿ.12 ರಂದು ಹಲಸೂರಿನಲ್ಲಿರುವ ಯುವತಿ ಮನೆ ಬಳಿ ಹೋಗಿ ಸ್ಕೂಟರ್​ ಮೇಲೆ ಪೆಟ್ರೋಲ್ ಸುರಿದು ಯುವಕ ಬೆಂಕಿ ಹಚ್ಚಿ ಪರಾರಿಯಾಗಿದ್ದ. ವಿಕ್ರಂ ಕಳೆದ ಮೂರು ವರ್ಷಗಳಿಂದ ಯುವತಿ ಪ್ರೀತಿಸುತ್ತಿದ್ದ. ಅಲ್ಲದೇ ಡ್ರಗ್ ಪೆಡ್ಲಿಂಗ್​​ನಲ್ಲಿ ತೊಡಗಿಸಿಕೊಂಡಿದ್ದ. ಈ ಬಗ್ಗೆ ಅರಿತ ಯುವತಿ, ಅಪರಾಧ ಕೃತ್ಯವೆ ಎಸಗದಂತೆ ಬೈದು ಬುದ್ಧಿ ಹೇಳಿದರೂ ವಿಕ್ರಂ ಬಿಟಿಎಂ ಲೇಔಟ್, ಕೋರಮಂಗಲ, ಮಡಿವಾಳ ಸೇರಿದಂತೆ ವಿವಿಧ ಕಡೆ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವುದನ್ನು ಮುಂದುವರೆಸಿದ್ದ.

ಅರೆಸ್ಟ್ ಮಾಡಿಸಿದರೆ ಬುದ್ಧಿ ಬರುತ್ತೆ ಎಂದು ಯುವತಿ ಭಾವಿಸಿ, ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಮಡಿವಾಳ ಪೊಲೀಸರು ಡ್ರಗ್ಸ್ ಕೇಸ್​​ನಲ್ಲಿ ವಿಕ್ರಂನನ್ನ ಬಂಧಿಸಿದ್ದರು. ಎಂಟು ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ ವಿಕ್ರಂ, ತನ್ನ ಬಂಧನಕ್ಕೆ ಯುವತಿಯೇ ಕಾರಣ ಎಂದು ತಿಳಿದು ಆಕೆ ಮನೆ ಬಳಿ ಹೋಗಿ ಸ್ಕೂಟರ್​​ಗೆ ಬೆಂಕಿ ಹಚ್ಚಿದ್ದಾನೆ. ಈ ಸಂಬಂಧ ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಬಂಧಿಸಿದ್ದಾರೆ.

(ಓದಿ: ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ನಡುರಸ್ತೆಯಲ್ಲೇ ಮಹಿಳೆಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ!)

ABOUT THE AUTHOR

...view details