ಕರ್ನಾಟಕ

karnataka

ETV Bharat / state

ಸುಮಲತಾ ಅವರಿಗೆ ಸೂಕ್ತ ಭದ್ರತೆ ನೀಡಲಾಗಿದೆ: ಕಮಲ್​​ ಪಂಥ್ - undefined

ಕರ್ನಾಟಕದಲ್ಲಿ ಚುನಾವಣೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸರ್ವರೀತಿಯಲ್ಲೂ ಕ್ರಮ ತೆಗೆದುಕೊಂಡಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್​ಪಂಥ್​​ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಕಮಲ್​​ ಪಂಥ್

By

Published : Apr 16, 2019, 8:30 PM IST

Updated : Apr 16, 2019, 8:37 PM IST

ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಪೂರ್ವತಯಾರಿಯನ್ನು ರಾಜ್ಯಾದ್ಯಂತ ಮಾಡಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಕಮಲ್​​ ಪಂಥ್​​ ಈಟಿವಿ ಭಾರತ್​​​ಗೆ ತಿಳಿಸಿದ್ದಾರೆ.

ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ಹಾಗೆ ಪೊಲೀಸ್ ಇಲಾಖೆ ಕ್ರಮವನ್ನು ಕೈಗೊಂಡಿದೆ. ಮತದಾನ ಪೂರ್ವ ಚುನಾವಣಾ ಪ್ರಕ್ರಿಯೆಗಳು ಶಾಂತಿಯುತವಾಗಿವೆ. ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಗಂಭೀರ ಸ್ವರೂಪದ ಘಟನೆಗಳು ಸಂಭವಿಸಿಲ್ಲ ಎಂದರು.

ಕಮಲ್​​ ಪಂಥ್ ಜೊತೆ ಚಿಟ್‌ಚಾಟ್

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅವರಿಗೆ ನೀಡಿರುವ ಭದ್ರತೆಯ ಬಗ್ಗೆ ಮಾಹಿತಿ ನೀಡಿದ ಅವರು, ಎರಡು ಪಿಎಸ್​​ಐ, ಇನ್​​​ಸ್ಪೆಕ್ಟರ್​​​, ಮೂರು ಜನ ಸಿಬ್ಬಂದಿಯನ್ನು ಅವರ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಯುವ ಮತದಾರರಿಗೆ ಮತ ಹಾಕುವಂತೆ ಕರೆ ಕೊಟ್ಟ ಕಮಲ್ ಪಂತ್, ಚುನಾವಣೆಯಲ್ಲಿ ಮತದಾನ ಎನ್ನುವುದು ಒತ್ತಾಯದ ವಿಚಾರವಾಗಬಾರದು. ಮತದಾನವನ್ನು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

Last Updated : Apr 16, 2019, 8:37 PM IST

For All Latest Updates

TAGGED:

ABOUT THE AUTHOR

...view details