ಕರ್ನಾಟಕ

karnataka

By

Published : Oct 9, 2022, 4:04 PM IST

ETV Bharat / state

ಕಳೆನಾಶಕ ಸಿಂಪರಣೆ ಮಾಡುವಾಗ ವಿದ್ಯುತ್ ಸ್ವರ್ಶ.. ಯುವಕ ಸಾವು

ಕಳೆನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಸ್ವರ್ಶಿಸಿ ಯುವಕ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

young man died due to electric shock
ಕಳೆನಾಶಕ ಸಿಂಪರಣೆ ಮಾಡುವಾಗ ವಿದ್ಯುತ್ ಸ್ವರ್ಶ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ರಾಗಿ ಹೊಲದಲ್ಲಿ ಕಳೆನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಸ್ವರ್ಶಿಸಿ ಯುವಕ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊನ್ನಘಟ್ಟ ಗ್ರಾಮದ ಯುವಕ 34 ವರ್ಷದ ಜಗನ್ ಕುಮಾರ್ ಮೃತ ಯುವಕ.

ಕೊಡಿಗೆಹಳ್ಳಿ ಗ್ರಾಮದಲ್ಲಿ 20 ಗುಂಟೆ ಜಮೀನು ಖರೀದಿ ಮಾಡಿ, ಆ ಜಾಗದಲ್ಲಿ ರಾಗಿಯನ್ನು ಬೆಳೆದಿದ್ದರು. ರಾಗಿ ಬೆಳೆಯಲ್ಲಿ ವಿಪರೀತ ಕಳೆ ಬಂದಿದೆ ಎಂದು ಕಳೆ ನಾಶಕ ಸಿಂಪರಣೆ ಮಾಡಲು ರಾಗಿ ಹೋಲಕ್ಕೆ ಬಂದಿದ್ದಾರೆ. ಕಳೆ ನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಕೈಗೆಟುಕುವ ಎತ್ತರದಲ್ಲಿ 11 ಕೆ.ವಿ ವಿದ್ಯುತ್ ಲೈನ್ ಜಗನ್ ಕುಮಾರ್​ಗೆ ತಗುಲಿದೆ. ವಿದ್ಯುತ್ ಸ್ವರ್ಶದಿಂದ ಜಗನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳೆನಾಶಕ ಸಿಂಪರಣೆ ಮಾಡುವಾಗ ವಿದ್ಯುತ್ ಸ್ವರ್ಶ ಯುವಕ ಸಾವು

ಹೊಲದಲ್ಲಿ ಹಾದು ಹೋಗಿದ್ದ 11 ಕೆವಿ ವಿದ್ಯುತ್ ಲೈನ್ ಸರಿಪಡಿಸುವಂತೆ ಹಲವು ಬಾರಿ ಬೆಸ್ಕಾಂ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಬೆಸ್ಕಾಂ ಇಲಾಖೆ ವಿದ್ಯುತ್ ಲೈನ್ ಸರಿಪಡಿಸದೆ ನಿರ್ಲಕ್ಷ್ಯತೆ ತೋರಿತು. ಬೆಸ್ಕಾಂನವರ ನಿರ್ಲಕ್ಷ್ಯತೆಯಿಂದ ಯುವಕನ ಸಾವಾಗಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ :ಹಸಿರುಟ್ಟ ಭೂಮಿ ತಾಯಿಗೆ ಸೀಮಂತದ ಹಬ್ಬ.. ಮಲೆನಾಡಿನಲ್ಲಿ ಕಳೆಗಟ್ಟಿದ ಭೂಮಿ ಹುಣ್ಣಿಮೆ

ABOUT THE AUTHOR

...view details