ಕರ್ನಾಟಕ

karnataka

ಜೂನಿಯರ್ ರಾಕಿಂಗ್​ ಸ್ಟಾರ್​ನನ್ನು ವಿಶೇಷವಾಗಿ ಸ್ವಾಗತಿಸಿದ ಯಶ್ ಫ್ಯಾನ್ಸ್

By

Published : Nov 6, 2019, 5:18 AM IST

ಅಖಿಲ ಕರ್ನಾಟಕ ರಾಕಿಂಗ್​ ಸ್ಟಾರ್ ಫ್ಯಾನ್ಸ್ ವತಿಯಿಂದ ನಗರದ ಮಾರತ್ ಹಳ್ಳಿಯಲ್ಲಿರುವ ನಂದಾದೀಪ ಬುದ್ಧಿಮಾಂದ್ಯ ಅನಾಥ ಮಕ್ಕಳ ಆಶ್ರಮದಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಜೂನಿಯರ್ ರಾಕಿಭಾಯ್​ನನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.

ಯಶ್ ಫ್ಯಾನ್ಸ್

ಬೆಂಗಳೂರು:ರಾಕಿಂಗ್​ ಸ್ಟಾರ್​ ಯಶ್​ಗೆ ಗಂಡು ಮಗು ಜನಿಸಿದ್ದಕ್ಕೆ ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚಿ ರಾಕಿ ಭಾಯ್​ ಫ್ಯಾನ್ಸ್​ ಸಂಭ್ರಮಿಸಿದ್ದಾರೆ.

ಸ್ಯಾಂಡಲ್​ವುಡ್​ನ ರಾಕಿಂಗ್ ದಂಪತಿಗೆ ಅಕ್ಟೋಬರ್ 30 ರಂದು ಗಂಡುಮಗು ಜನಿಸಿದ್ದು, ಜೂನಿಯರ್ ರಾಕಿ ಆಗಮನಕ್ಕೆ ಮಿಸ್ಟರ್ & ಮಿಸ್ಸಸ್ ರಾಮಾಚಾರಿ ಹಾಗೂ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೆ ಜೂನಿಯರ್ ರಾಕಿ ಭಾಯ್ ಆಗಮಿಸಿರುವುದಕ್ಕೆ ರಾಕಿ ಭಾಯ್ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.

ಅಖಿಲ ಕರ್ನಾಟಕ ರಾಕಿಂಗ್​ ಸ್ಟಾರ್ ಫ್ಯಾನ್ಸ್ ವತಿಯಿಂದ ನಗರದ ಮಾರತ್ ಹಳ್ಳಿಯಲ್ಲಿರುವ ನಂದಾದೀಪ ಬುದ್ಧಿಮಾಂದ್ಯ ಅನಾಥ ಮಕ್ಕಳ ಆಶ್ರಮದಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಜೂನಿಯರ್ ರಾಕಿಭಾಯ್​ನನ್ನು ವಿಶೇಷವಾಗಿ ಸ್ವಾಗತಿಸಿದ್ದಾರ.

For All Latest Updates

ABOUT THE AUTHOR

...view details