ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದ ನ್ಯೂ ಬಿಇಎಲ್ ರಸ್ತೆ ಬಳಿ ಸಸಿ ನೆಡುವ ಮೂಲಕ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ವಿಶ್ವ ಪರಿಸರ ದಿನ ಆಚರಿಸಿದರು.
ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಡಾ. ಅಶ್ವತ್ಥನಾರಾಯಣ - DCM ashwathanarayana news
ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆ ಬಳಿ ಸಸಿ ನೆಡುವ ಮೂಲಕ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ವಿಶ್ವ ಪರಿಸರ ದಿನವನ್ನು ಆಚರಿಸಿದರು.
![ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಡಾ. ಅಶ್ವತ್ಥನಾರಾಯಣ Ashwath narayan](https://etvbharatimages.akamaized.net/etvbharat/prod-images/768-512-12:14-kn-bng-02-dcm-environment-day-script-7208080-05062020121028-0506f-1591339228-422.jpg)
Ashwath narayan
ವಿಶ್ವ ಪರಿಸರ ದಿನದ ನಿಮಿತ್ತ ಇಂದು ನ್ಯೂ ಬಿಇಎಲ್ ರಸ್ತೆ ಬಳಿ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರ ಸ್ನೇಹಿ ಬದುಕು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಪ್ರಕೃತಿ ಮಾತೆ ಗೌರವಿಸಿ, ರಕ್ಷಿಸಿ ಸುಸ್ಥಿರ ಜೀವನದ ಕ್ರಮಗಳನ್ನು ಪಾಲಿಸುವ ಸಂಕಲ್ಪ ಮಾಡೋಣ ಎಂದರು.
ಈ ವೇಳೆ, ಪಾಲಿಕೆ ಸದಸ್ಯರಾದ ಹೇಮಲತಾ ಸತೀಶ್, ಸುಮಂಗಲಾ ಕೇಶವ್ ಮತ್ತು ಮಲ್ಲೇಶ್ವರಂ ಮಂಡಲ ಬಿಜೆಪಿ ಅಧ್ಯಕರಾದ ಕಾವೇರಿ ಕೇದಾರನಾಥ್ ಉಪಸ್ಥಿತರಿದ್ದರು.