ಕರ್ನಾಟಕ

karnataka

By

Published : Apr 8, 2021, 3:10 PM IST

ETV Bharat / state

ಸಿಡಿ ಪ್ರಕರಣ: ಕೋರ್ಟ್​​ ಮುಂದೆ ಶರಣಾಗಲಿದ್ದಾರಾ ಶಂಕಿತ ಆರೋಪಿಗಳು?

ಸಿಡಿ ಪ್ರಕರಣದಲ್ಲಿ ನಾಪತ್ತೆಯಾಗಿರುವ ಶಂಕಿತ ಆರೋಪಿಗಳು ನೇರವಾಗಿ ಕೋರ್ಟ್​​ಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಶಂಕಿತರನ್ನು ಹುಡುಕುವಲ್ಲಿ ಎಸ್​​ಐಟಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ನಡುವೆ ಶಂಕಿತರೇ ಕೋರ್ಟ್​​ ಮುಂದೆ ತಮ್ಮ ಹೇಳಿಕೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

what-if-suspected-accused-to-surrender-before-court-in-case-dot
ಕೋರ್ಟ್​​ ಮುಂದೆ ಶರಣಾಗಲಿದ್ದಾರಾ ಶಂಕಿತ ಆರೋಪಿಗಳು..?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಶಂಕಿತ ಆರೋಪಿಗಳಿಗಾಗಿ ಎಸ್ಐಟಿ ನಿರಂತರ ಶೋಧ ನಡೆಸುತ್ತಿದ್ದರೂ ಅವರು ಪತ್ತೆಯಾಗುತ್ತಿಲ್ಲ. ಇನ್ನೊಂದೆಡೆ ಶಂಕಿತರೇ ನೇರವಾಗಿ ಕೋರ್ಟ್ ಮುಂದೆ ಹಾಜರಾಗುವ ಚಿಂತನೆ ನಡೆಸುತ್ತಿದ್ದಾರೆ ಎಂಬ ಅನುಮಾನ ಮೂಡಿದೆ‌.

ಸಿಡಿ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿರುವ ಶಂಕಿತ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಎಸ್ಐಟಿ ಶೋಧ ನಡೆಸುತ್ತಿದ್ದರೂ ಪತ್ತೆಯಾಗಿರಲಿಲ್ಲ. ಇದೀಗ ನ್ಯಾಯಾಲಯದ‌ ಮುಂದೆಯೇ ಶಂಕಿತರು ಹಾಜರಾಗುವ ಸುಳಿವು ಸಿಕ್ಕಿದೆ ಎನ್ನಲಾಗ್ತಿದೆ.

ಸಿಡಿ ಗ್ಯಾಂಗ್ ಶರಣಾಗುವ ಮುನ್ನ ಬಂಧಿಸಲು ಎಸ್ಐಟಿ ಪ್ಲಾನ್ ರೂಪಿಸಿದ್ದು, ಜಡ್ಜ್ ಭೇಟಿ ಮಾಡುವ ಮುನ್ನವೇ ಬಂಧಿಸಲು ಪ್ರತಿತಂತ್ರ ರೂಪಿಸಿದೆ. ಅದಕ್ಕಾಗಿ ಗ್ಯಾಂಗ್ ಜೊತೆ ಸಂಪರ್ಕದಲ್ಲಿರುವ ಶಂಕಿತರ ಮೇಲೆ ಕಣ್ಣಿಟ್ಟಿದೆ.‌ ಆದರೆ ಇದೆಲ್ಲದಕ್ಕೂ ಮೊದಲೇ ಆರೋಪಿಗಳು ಕೋರ್ಟ್​​ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡುವ ಸಾಧ್ಯತೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ಕಲಬುರ್ಗಿ ವಿವಿಯಲ್ಲೂ 'ಸಿಡಿ' ಸದ್ದು: ಮಹಿಳೆಯ ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪ

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಕೋರ್ಟ್​ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ನೀಡಿದ್ದಾಳೆ. ಎಸ್​ಐಟಿ ವಿಚಾರಣೆಯನ್ನು ಎದುರಿಸುತ್ತಿದ್ದಾಳೆ.

ABOUT THE AUTHOR

...view details