ಕರ್ನಾಟಕ

karnataka

ETV Bharat / state

ಸ್ಪೀಕರ್​ ವಿಧಾನಸಭಾ ಸದಸ್ಯರನ್ನು ಯಾವ ಸಂದರ್ಭಗಳಲ್ಲಿ ಅನರ್ಹತೆ ಮಾಡಬಹುದು?

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವುಗಳನ್ನು ನಾವು ನೋಡುತ್ತಿದ್ದೇವೆ. ಅಂತೆಯೇ ಹಲವಾರು ದಿನಗಳ ಹೈಡ್ರಾಮದ ನಂತರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕುಸಿದು ಬಿದ್ದಿದೆ. ಈ ನಡುವೆ ಸ್ಪೀಕರ್​ ರಮೇಶ್​ ಕುಮಾರ್​ ತಮ್ಮ ಪರಮಾಧಿಕಾರ ಬಳಸಿ 3 ಶಾಸಕರನ್ನು ಅನರ್ಹಗೊಳಿಸಿದ್ದಾರೆ.

By

Published : Jul 26, 2019, 12:49 PM IST

ಸ್ಪೀಕರ್​ ವಿಧಾನಸಭಾ ಸದಸ್ಯರನ್ನು ಯಾವ ಸಂದರ್ಭಗಳಲ್ಲಿ ಅನರ್ಹತೆ ಮಾಡಬಹುದು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವುಗಳನ್ನು ನಾವು ನೋಡುತ್ತಿದ್ದೇವೆ. ಅಂತೆಯೇ ಹಲವಾರು ದಿನಗಳ ಹೈಡ್ರಾಮದ ನಂತರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕುಸಿದು ಬಿದ್ದಿದೆ. ಈ ನಡುವೆ ಸ್ಪೀಕರ್​ ರಮೇಶ್​ ಕುಮಾರ್​ ತಮ್ಮ ಪರಮಾಧಿಕಾರ ಬಳಸಿ 3 ಶಾಸಕರನ್ನು ಅನರ್ಹಗೊಳಿಸಿದ್ದಾರೆ.

ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿದೆ. ಹಾಗಾದ್ರೆ ಸ್ಪೀಕರ್​ ಯಾವೆಲ್ಲ ಸಂದರ್ಭದಲ್ಲಿ ಶಾಸಕರನ್ನು ಅನರ್ಹತೆ ಮಾಡಬಹುದು ಎಂಬ ಅಂಶಗಳನ್ನು ನೋಡವುದಾದರೆ

> ವಿಧಾನಸಭಾ ಸದಸ್ಯರು ರಾಜಕೀಯ ಪಕ್ಷವೊಂದರ ಸದಸ್ಯತ್ವಕ್ಕೆ ರಾಜೀನಾಮೆ ನೀಡದೇ ಮತ್ತೊಂದು ಪಕ್ಷ ಸೇರಿದರೆ

> ವಿಪ್​ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರು ಹಾಜರಾದಾಗ

> ಸ್ವತಂತ್ರ ಸದಸ್ಯನೊಬ್ಬ ಚುನಾವಣೆ ಬಳಿಕ ರಾಜಕೀಯ ಪಕ್ಷವನ್ನು ಸೇರಿ ಸಹ ಸದಸ್ಯನಾಗಿದ್ದೇನೆ ಎಂದು ಆ ಶಾಸಕಾಂಗ ಪಕ್ಷದ ನಾಯಕ ಹಾಗೂ ಸ್ಪೀಕರ್​ಗೆ ಪತ್ರ ನೀಡಿದ್ದರೆ, ಅದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನ ಒದಗಿಸಿದ್ದಾಗ.

> ವಿಶ್ವಾಸಮತ ಯಾಚನೆಗೂ 15 ದಿನ ಮೊದಲು ಪಕ್ಷದಿಂದ ಪೂರ್ವಾನುಮತಿ ಪಡೆದ ಸದಸ್ಯರು ವಿಪ್​ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರಾದರೆ ಅನರ್ಹತೆ ಭೀತಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಪಕ್ಷದ ಮುಖ್ಯಸಚೇತಕ ಹಾಗೂ ಶಾಸಕಾಂಗ ಪಕ್ಷದ ನಾಯಕರ ಅನುಮತಿ ಪಡೆಯದೇ ಇದ್ದಾಗ ಅನರ್ಹತೆ ಮಾಡಬಹುದು.

> ಲೋಕಸಭೆಯಲ್ಲಿ ಮತ್ತು ವಿಧಾನಸಭೆಯ ನಾಮಕರಣಗೊಂಡ ಸದಸ್ಯರು, ನಾಮಕರಣಗೊಂಡ 6 ತಿಂಗಳ ನಂತರ ಯಾವುದೇ ಪಕ್ಷ ಸೇರಿದರೆ ಅಂತಹ ಶಾಸಕನನ್ನು ಆ ಪಕ್ಷದ ಕೋರಿಕೆ ಮೆರೆಗೆ ಅನರ್ಹತೆ ಮಾಡಬಹುದು

ಈ ಎಲ್ಲಾ ಅಂಶಗಳ ಮುಖೇನ ಸ್ಪೀಕರ್​ ತಮ್ಮ ಅಧಿಕಾರದ ಕಾರ್ಯ ವ್ಯಾಪ್ತಿಯಲ್ಲಿ ಶಾಸಕರನ್ನು ಅನರ್ಹಗೊಳಿಸಬಹುದು.

ABOUT THE AUTHOR

...view details