ಸುಪ್ರೀಂನಲ್ಲಿ ವಾದ, ತೀರ್ಪು ಏನೇ ಇರಲಿ, ಸರ್ಕಾರ ಬೀಳೋದು ನಿಶ್ಚಿತ: ಬಿಜೆಪಿ ಶಾಸಕರ ವಿಶ್ವಾಸ - Kannada news,Etv Bharat,What did, BJP, lawmakers, say ,about,Supreme Court, hearing,ಸುಪ್ರೀಂ ಕೋರ್ಟ್,ಸರ್ಕಾರ ಬೀಳೋದು ನಿಶ್ಚಿತ,ಸಿ.ಟಿ.ರವಿ,16 ಜನ ಶಾಸಕರು, ಸ್ಪೀಕರ್,ರಾಜೀನಾಮೆ ,ರಮಡ ರೆಸಾರ್ಟ್,
16 ಜನ ಶಾಸಕರು ಸ್ಪೀಕರ್ಗೆ ಸಲ್ಲಿಸಿರುವ ರಾಜೀನಾಮೆ ಅಂಗಿಕಾರದ ಬಗ್ಗೆ ಇಂದು ಸುಪ್ರೀಂ ಕೋರ್ಟ್ನಲ್ಲಿ ವಾದ ಪ್ರತಿವಾದ ನಡೆದು ನಾಳೆಗೆ ತೀರ್ಪು ಕಾಯ್ದಿರಿಸಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.
![ಸುಪ್ರೀಂನಲ್ಲಿ ವಾದ, ತೀರ್ಪು ಏನೇ ಇರಲಿ, ಸರ್ಕಾರ ಬೀಳೋದು ನಿಶ್ಚಿತ: ಬಿಜೆಪಿ ಶಾಸಕರ ವಿಶ್ವಾಸ](https://etvbharatimages.akamaized.net/etvbharat/prod-images/768-512-3856043-810-3856043-1563277983316.jpg)
ಬೆಂಗಳೂರು: 16 ಜನ ಶಾಸಕರು ಸ್ಪೀಕರ್ಗೆ ಸಲ್ಲಿಸಿರುವ ರಾಜೀನಾಮೆ ಅಂಗಿಕಾರದ ಬಗ್ಗೆ ಇಂದು ಸುಪ್ರೀಂ ಕೋರ್ಟ್ನಲ್ಲಿ ವಾದ ಪ್ರತಿವಾದ ನಡೆದು ನಾಳೆಗೆ ತೀರ್ಪು ಕಾಯ್ದಿರಿಸಲಾಗಿದೆ. ಈ ಬಗ್ಗೆ ರಮಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಶಾಸಕ ಸಿ.ಟಿ.ರವಿ ಮಾತನಾಡಿ, ಸುಪ್ರೀಂ ಕೋರ್ಟ್ನಲ್ಲಿ ವಾದ, ತೀರ್ಪು ಏನೇ ಇರಲಿ. ಈ ಸರ್ಕಾರ ಬೀಳೋದು ನಿಶ್ಚಿತ. ವಾದ - ಪ್ರತಿವಾದಗಳು ಸರ್ಕಾರವನ್ನು ಕಾಪಾಡಲ್ಲ. ಜನರ ವಿಶ್ವಾಸ ಕಳೆದುಕೊಂಡಿರೋ ಈ ಸರ್ಕಾರ ಗುರುವಾರ ಸಂಜೆ ಇತಿಹಾಸ ಸೇರುತ್ತದೆ. ಕಾಂಗ್ರೆಸ್ ಈಗಾಗಲೇ ವಿಪಕ್ಷದಲ್ಲಿ ಕೂರಲು ಮಾನಸಿಕವಾಗಿ ಸಿದ್ಧತೆ ನಡೆಸಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿಕೊಂಡ ಹಾಗೆ ಆಗಿದೆ ಎಂದರು.
TAGGED:
ಬೆಂಗಳೂರು