ಬೆಂಗಳೂರು: ಇಂದು ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ಬೀದರ್ನಲ್ಲಿ ಕನಿಷ್ಟ ಉಷ್ಣಾಂಶ 12.4 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಹೆಚ್ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮುಂದಿನ ಐದು ದಿನ ರಾಜ್ಯದಲ್ಲಿ ಒಣಹವೆ : ಹೆಚ್ ಎಸ್ ಪಾಟೀಲ್ - Department of Meteorology
ಮುಂಜಾನೆ ವೇಳೆ ಮಂಜು ಕವಿಯುವ ಸಾಧ್ಯತೆ ಇದೆ. ಹವಾಮಾನಕ್ಕೆ ಸಂಬಂಧಿಸಿದ ಮಳೆ, ಗುಡುಗು, ಮೋಡ, ಬಿರುಗಾಳಿ, ಆಲಿಕಲ್ಲು, ಮಿಂಚು ಮೊದಲಾದ ಘಟನೆಗಳನ್ನು ಫೋಟೋ ಸಹಿತ ಭಾರತೀಯ ಹವಾಮಾನ ಇಲಾಖೆಯ ವೆಬ್ಸೈಟ್ನಲ್ಲಿ ಹಂಚಿಕೊಳ್ಳಬಹುದು..
![ಮುಂದಿನ ಐದು ದಿನ ರಾಜ್ಯದಲ್ಲಿ ಒಣಹವೆ : ಹೆಚ್ ಎಸ್ ಪಾಟೀಲ್ dsd](https://etvbharatimages.akamaized.net/etvbharat/prod-images/768-512-10313683-thumbnail-3x2-vish.jpg)
ಹವಾಮಾನ ವರದಿ
ಹವಾಮಾನ ಇಲಾಖೆ ವರದಿ
ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿಯಲ್ಲಿ 14 ಡಿಗ್ರಿ ಸೆಂಟಿಗ್ರೇಡ್, ಬೆಂಗಳೂರು 16 ಡಿಗ್ರಿ ಸೆಂಟಿಗ್ರೇಡ್ ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಮುಂದಿನ ಐದು ದಿನ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಕನಿಷ್ಠ-15, ಗರಿಷ್ಠ- 29 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ.
ಮುಂಜಾನೆ ವೇಳೆ ಮಂಜು ಕವಿಯುವ ಸಾಧ್ಯತೆ ಇದೆ. ಹವಾಮಾನಕ್ಕೆ ಸಂಬಂಧಿಸಿದ ಮಳೆ, ಗುಡುಗು, ಮೋಡ, ಬಿರುಗಾಳಿ, ಆಲಿಕಲ್ಲು, ಮಿಂಚು ಮೊದಲಾದ ಘಟನೆಗಳನ್ನು ಫೋಟೋ ಸಹಿತ ಭಾರತೀಯ ಹವಾಮಾನ ಇಲಾಖೆಯ ವೆಬ್ಸೈಟ್ನಲ್ಲಿ ಹಂಚಿಕೊಳ್ಳಬಹುದು ಎಂದರು.