ಕರ್ನಾಟಕ

karnataka

ಬಹುಮತ ಸಾಬೀತುಪಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ.. ಸಿಎಂ ಯಡಿಯೂರಪ್ಪ ವಿಶ್ವಾಸ

By

Published : Jul 28, 2019, 11:52 AM IST

ಹೊಸದಾಗಿ ರಚನೆಯಾದ ಸರ್ಕಾರ ಸೋಮವಾರ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೆ. ಹಾಗೆ ತಿಂಗಳು ಕೊನೆಯಾದ ಕಾರಣ ಸರ್ಕಾರಿ ನೌಕರರ ಸಂಬಳವಾಗಬೇಕು. ಹೀಗಾಗಿ ಸೋಮವಾರ ಫೈನಾನ್ಸ್ ಬಿಲ್ ಪಾಸ್ ಆಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಬಿಎಸ್​ ಯಡಿಯೂರಪ್ಪ, ಮುಖ್ಯಮಂತ್ರಿ

ಬೆಂಗಳೂರು:ಹೊ ಸದಾಗಿ ರಚನೆಯಾದ ಸರ್ಕಾರ ಸೋಮವಾರ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೆ. ಹಾಗೆ ತಿಂಗಳು ಕೊನೆಯಾದ ಕಾರಣ ಸರ್ಕಾರಿ ನೌಕರರ ಸಂಬಳವಾಗಬೇಕು. ಹೀಗಾಗಿ ಸೋಮವಾರ ಫೈನಾನ್ಸ್ ಬಿಲ್ ಪಾಸ್ ಆಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಬಹುಮತ ಸಾಬೀತುಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ.. ಯಡಿಯೂರಪ್ಪ

ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಅವಧಿಯ ಮಂಡಿಸಲಾದ ಬಿಲ್‌ನ ನಾನು ಪಾಸ್​ ಮಾಡ್ತೇನೆ ಎಂದು ಹೇಳಿದರು. ಇನ್ನು ಇಂದು ಮುಂಜಾನೆಯಿಂದ ಯಡಿಯೂರಪ್ಪ ಮನೆಗೆ ಅಭಿಮಾನಿಗಳ ದಂಡು ಬರ್ತಿದ್ದು ಯಡಿಯೂರಪ್ಪ ಅವರು ಎಲ್ಲಾ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮಾಧ್ಯಮದವರ ಜೊತೆ ಮಾತುಕತೆ ನಡೆಸಿದ್ರು.

ಇಂದು ಸಂಜೆ 3 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಾಲಾಗಿದ್ದು, ಈ ಸಭೆಯಲ್ಲಿ ಎಲ್ಲಾ 105 ಶಾಸಕರು ಭಾಗಿಯಾಗ್ತಾರೆ ಅಂತಾ ತಿಳಿಸಿದ್ರು.

ABOUT THE AUTHOR

...view details