ಕರ್ನಾಟಕ

karnataka

By

Published : Feb 2, 2021, 2:27 PM IST

ETV Bharat / state

ಅಭಿವೃದ್ಧಿ ದೃಷ್ಟಿಯಿಂದ ಸಿಎಂ ಜೊತೆ ಮಾತನಾಡಿದ್ದೇವೆ: ಎಂ.ಪಿ.ರೇಣುಕಾಚಾರ್ಯ ಸ್ಪಷ್ಟನೆ

ಕ್ಷೇತ್ರದ ಕೆಲಸದ ಒತ್ತಡದ ನಡುವೆ ಸಿಎಂ ಭೇಟಿಯಾಗಿರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಿನ್ನೆ ಸಿಎಂ ಜೊತೆ ಮಾತನಾಡಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

CM political secretary
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ

ಬೆಂಗಳೂರು: ನಿನ್ನೆ ಸಿಎಂ ಮನೆಗೆ ನಾನು, ರಾಜುಗೌಡ ಮುನೇನಕೊಪ್ಪ, ಲಿಂಗಪ್ಪ ಕೆಲವು ಶಾಸಕರು ಹೋಗಿದ್ದೆವು. ಅಭಿವೃದ್ಧಿ ದೃಷ್ಟಿಯಿಂದ ನಿನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಜೊತೆ ಮಾತನಾಡಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಎಂ.ಪಿ. ರೇಣುಕಾಚಾರ್ಯ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಕೆಲಸದ ಒತ್ತಡದ ನಡುವೆ ಸಿಎಂ ಭೇಟಿಯಾಗಿರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಿನ್ನೆ ಸಿಎಂ ಜೊತೆ ಮಾತನಾಡಿದ್ದೇವೆ ಎಂದು ತಿಳಿಸಿದರು. ನಿನ್ನೆ ಸುನೀಲ್ ಕುಮಾರ್ ಕಚೇರಿಯಲ್ಲಿ ಕೆಲ‌ ಶಾಸಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುನೀಲ್ ಕುಮಾರ್ ಆಡಳಿತ ಪಕ್ಷದ ಸಚೇತಕ‌. ಅವರೆಲ್ಲ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಹಿರಿಯರಿದ್ದಾರೆ. ಅವರ ಜೊತೆ ಕೆಲ ಶಾಸಕರು ಮಾತಾಡಿದ್ರೆ ತಪ್ಪೇನಿದೆ?. ಹಾದಿ ಬೀದಿಯಲ್ಲಿ ಮಾತಾಡುವ ಬದಲು ಒಟ್ಟಿಗೆ ಕುಳಿತು ಮಾತಾಡಿದ್ದಾರೆ. ಸಿಎಂಗೆ ಮುಕ್ತ ಸಲಹೆ ನೀಡಲು ಎಲ್ಲರಿಗೂ ಅವಕಾಶ ಇದೆ ಎಂದು ಸುನೀಲ್ ಕುಮಾರ್, ತಿಪ್ಪಾರೆಡ್ಡಿ ಮತ್ತಿತರ ಶಾಸಕರ ಸಭೆಯನ್ನು ಸಮರ್ಥಿಸಿಕೊಂಡರು.

ಓದಿ:ಜಾರಕಿಹೊಳಿ ನಿವಾಸದಲ್ಲಿ ರೇಣುಕಾಚಾರ್ಯ & ಟೀಂ ಸಭೆ; ಭೋಜನ ಕೂಟದ ನೆಪದಲ್ಲಿ ಅತೃಪ್ತರ ಮೀಟಿಂಗ್?

ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯತ್ನಾಳ್ ಹಿರಿಯರು. ಹಾಗೆಲ್ಲ ಮಾತನಾಡಬಾರದು. ಅವರ ಜೊತೆ ನಾವು ಕುಳಿತು ಮಾತಾನಾಡುತ್ತೇವೆ. ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪರನ್ನು ನಾಯಕರನ್ನಾಗಿ ಮಾಡಿದ್ದು, ಯತ್ನಾಳ್ ಹೀಗೆಲ್ಲಾ ಹೇಳಿಕೆ‌ ನೀಡಿ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತರಬಾರದು ಎಂದು ಮನವಿ ಮಾಡಿದರು.

ನಾನು ಅತೃಪ್ತರ ಗುಂಪಿಗೆ ಸೇರಿಲ್ಲ:

ಇದೇ ವೇಳೆ ಮಾತನಾಡಿದ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ನಾನು ಅತೃಪ್ತರ ಗುಂಪಿಗೆ ಸೇರಿಲ್ಲ. ಮಾಧ್ಯಮದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹಾಗಾಗಿ ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಮೊದಲಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಇದ್ದೇನೆ. ನನಗೆ ಯಾವುದೇ ಅಸಮಾಧಾನವಿಲ್ಲ. ನಾನು ಯಡಿಯೂರಪ್ಪ ಪರ ಇದ್ದೇನೆ ಎಂದರು.

ABOUT THE AUTHOR

...view details