ಬೆಂಗಳೂರು:ನಿನ್ನೆ ವಿಶ್ವಾಸಮತದಲ್ಲಿ ಸೋತಿರುವ ಬಗ್ಗೆ ತಮಗೆ ಯಾವುದೇ ವಿಷಾಧವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ವಿಶ್ವಾಸ ಮತ ಸೋಲಿನ ಹಿನ್ನೆಲೆ, ಹೆಚ್.ಡಿ.ದೇವೇಗೌಡ ಇಂದು ನಿರ್ಗಮಿತ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಇನ್ನಿತರ ನಾಯಕರ ಜೊತೆ ಮಹತ್ವದ ಸಭೆ ನಡೆಸಿದರು. ಆ ಬಳಿಕ ಮಾತನಾಡಿದ ಹೆಚ್ಡಿಡಿ, ನಿನ್ನೆ ಕುಮಾರಸ್ವಾಮಿ ವಿಶ್ವಾಸಮತ ಗೆಲ್ಲುವಲ್ಲಿ ವಿಫಲವಾಗಿರುವುದಕ್ಕೆ ಯಾವುದೇ ಬೇಸರ ಇಲ್ಲ. ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬಗ್ಗೆ ನಮಗೆ ಯಾವುದೇ ದುಃಖವೂ ಇಲ್ಲ. ಈ ಸಂಬಂಧ ನಾವು ಯಾರನ್ನೂ ದೂರುವುದಿಲ್ಲ ಎಂದು ಹೇಳಿದ್ದಾರೆ.