ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರ ಪತನ.. ನಮಗೆ ಯಾವುದೇ ವಿಷಾದವಿಲ್ಲ ಎಂದ ದೊಡ್ಡಗೌಡ್ರು! - undefined

ನಿನ್ನೆ ವಿಶ್ವಾಸಮತದಲ್ಲಿ ಸೋತಿರುವ ಬಗ್ಗೆ ತಮಗೆ ಯಾವುದೇ ವಿಷಾಧವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.​ಡಿ. ದೇವೇಗೌಡ ಹೇಳಿದ್ದಾರೆ.

ಮೈತ್ರಿ ಸರ್ಕಾರ ಪತನ.. ನಮಗೆ ಯಾವುದೇ ವಿಷಾಧವಿಲ್ಲ ಎಂದ ಹೆಚ್​ಡಿಡಿ

By

Published : Jul 24, 2019, 3:21 PM IST

Updated : Jul 24, 2019, 3:47 PM IST

ಬೆಂಗಳೂರು:ನಿನ್ನೆ ವಿಶ್ವಾಸಮತದಲ್ಲಿ ಸೋತಿರುವ ಬಗ್ಗೆ ತಮಗೆ ಯಾವುದೇ ವಿಷಾಧವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.​ಡಿ. ದೇವೇಗೌಡ ಹೇಳಿದ್ದಾರೆ.

ವಿಶ್ವಾಸ ಮತ ಸೋಲಿನ ಹಿನ್ನೆಲೆ, ಹೆಚ್​.ಡಿ.ದೇವೇಗೌಡ ಇಂದು ನಿರ್ಗಮಿತ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.​ಡಿ. ರೇವಣ್ಣ ಹಾಗೂ ಇನ್ನಿತರ ನಾಯಕರ ಜೊತೆ ಮಹತ್ವದ ಸಭೆ ನಡೆಸಿದರು. ಆ ಬಳಿಕ ಮಾತನಾಡಿದ ಹೆಚ್​ಡಿಡಿ, ನಿನ್ನೆ ಕುಮಾರಸ್ವಾಮಿ ವಿಶ್ವಾಸಮತ ಗೆಲ್ಲುವಲ್ಲಿ ವಿಫಲವಾಗಿರುವುದಕ್ಕೆ ಯಾವುದೇ ಬೇಸರ ಇಲ್ಲ. ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬಗ್ಗೆ ನಮಗೆ ಯಾವುದೇ ದುಃಖವೂ ಇಲ್ಲ. ಈ ಸಂಬಂಧ ನಾವು ಯಾರನ್ನೂ ದೂರುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು,ನಾನಷ್ಟೇ ಅಲ್ಲ. ನಿರ್ಗಮಿತ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವರು ಪಕ್ಷದ ಹಿರಿಯ ನಾಯಕರಿಗೂ ಈ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಅಷ್ಟೇ ಕಾಂಗ್ರೆಸ್​ ಹಾಗೂ ಜೆಡಿಎಸ್​​ ನಡುವೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ದೇವೇಗೌಡರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

Last Updated : Jul 24, 2019, 3:47 PM IST

For All Latest Updates

TAGGED:

ABOUT THE AUTHOR

...view details