ದೊಡ್ಡಬಳ್ಳಾಪುರ :ಕಂದಾಯ ಸಚಿವ ಆರ್ ಅಶೋಕ್ ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನೋ ಚೇಂಜ್, ವಿ ಆರ್ ವಿತ್ ಯಡಿಯೂರಪ್ಪ, ಐ ಯಾಮ್ ವಿತ್ ಯಡಿಯೂರಪ್ಪ ಎಂದರು. ನಾಯಕತ್ವ ಬದಲಾವಣೆ ಹಿನ್ನೆಲೆ ಮಾತನಾಡಿದ ಅಶೋಕ್, ನಾಯಕತ್ವ ಬದಲಾವಣೆಯಾಗುವುದಿಲ್ಲ. ಎಲ್ಲ ಸಹಜವಾಗಿಯೇ ಇದೆ, ನಾಯಕತ್ವ ಬದಲಾವಣೆ ಬಗ್ಗೆ ಎಲ್ಲಾ ಪಕ್ಷದಲ್ಲೂ ಗೊಂದಲ ಇದ್ದೇ ಇರುತ್ತೆ. ಗೊಂದಲ ಇದ್ದಾಗಲೇ ರಾಜಕೀಯ ಅನಿಸೋದು. ಇದೆಲ್ಲಾ ಪಕ್ಷದ ಆಂತರಿಕ ವಿಚಾರ. ಅದನ್ನು ನಾಲ್ಕು ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿದರು.
ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ
ದೊಡ್ಡಬಳ್ಳಾಪುರ ನಗರದ ಡಾ.ರಾಜಕುಮಾರ್ ಕಲಾ ಮಂದಿರದಲ್ಲಿ ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಕೋವಿಡ್ ವಾರಿಯರ್ಗಳಿಗೆ ತರಕಾರಿ ಕಿಟ್ ಮತ್ತು ಮೆಡಿಕಲ್ ಕಿಟ್ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್, ವಿನಯ್ ಗುರೂಜಿ ಭಾಗವಹಿಸಿದರು. ನಂತರ ಮಾತನಾಡಿದ ಆರ್ ಅಶೋಕ್, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.
ಸಂಚಾರಿ ವಿಜಯ್ ಪರಿಸರ ಕಾಳಜಿಯುಳ್ಳ ನಟ, 20 ವರ್ಷಗಳ ನಂತರ ಕನ್ನಡ ಚಿತ್ರೋದ್ಯಮಕ್ಕೆ ರಾಷ್ಟ್ರ ಪ್ರಶಸ್ತಿ ತಂದವರು. ಅವರು ಸತ್ತ ಮೇಲು ಮಾನವೀಯತೆ ಮೆರೆದಿದ್ದಾರೆ, ಅವರ ಅಂಗಾಂಗಳನ್ನ ದಾನ ಮಾಡುವ ಮೂಲಕ 5 ಜನರಿಗೆ ಜೀವ ನೀಡಿದ್ದಾರೆ, ದೇವರ ಸಮಾನರಾದ ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.