ಬೆಂಗಳೂರು:ಹಾಲು, ಮೊಸರಿನ ದರವನ್ನು 3 ರೂಪಾಯಿ ಏರಿಕೆ ಮಾಡಲು ಮುಂದಾಗಿ ನಂತರ ಸರ್ಕಾರ ತಡೆ ಹಿಡಿದಿರುವ ಬೆನ್ನಲ್ಲೇ ನೀರಿನ ಶುಲ್ಕವೂ ಏರಿಕೆಯಾಗುವ ಸುಳಿವು ಸಿಕ್ಕಿದೆ. ಬೇಳೆ, ಕಾಳು, ಅಡುಗೆ ಎಣ್ಣೆ ಹೀಗೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೀರಿನ ಶುಲ್ಕವೂ ಏರಿಕೆಯಾದಲ್ಲಿ ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ. ಇದೀಗ ಜಲಮಂಡಳಿ ಪ್ರತೀ ವರ್ಷ ನೀರಿನ ಶುಲ್ಕ ಏರಿಕೆಗೆ ಅನುಮತಿ ಕೇಳಿ ಸರ್ಕಾರಕ್ಕೆ ಪತ್ರ ಬರೆದಿದೆ.
ನೀರಿನ ಶುಲ್ಕ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ: ಸದ್ಯದಲ್ಲೇ ಮತ್ತೊಂದು ಶಾಕ್? - ಕಾದಿದ್ಯಾ ಮತ್ತೊಂದು ಬೆಲೆ ಏರಿಕೆ ಶಾಕ್
ಜಲಮಂಡಳಿ ತನ್ನ ನಷ್ಟ ತಪ್ಪಿಸಲು ನೀರಿನ ಶುಲ್ಕ ಹೆಚ್ಚಿಸಲು ನಿರ್ಧರಿಸಿದೆ. ಆದರೆ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ದರ ಏರಿಕೆಯನ್ನು ಸರ್ಕಾರ ಸದ್ಯಕ್ಕೆ ದೂರ ಇಟ್ಟಿದೆ ಎನ್ನುವ ಮಾತೂ ಕೇಳಿ ಬಂದಿದೆ.
![ನೀರಿನ ಶುಲ್ಕ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ: ಸದ್ಯದಲ್ಲೇ ಮತ್ತೊಂದು ಶಾಕ್? Bangalore Water Board](https://etvbharatimages.akamaized.net/etvbharat/prod-images/768-512-16960746-thumbnail-3x2-meg.jpg)
ಬೆಂಗಳೂರು ಜಲಮಂಡಳಿ
ಈ ಬಗ್ಗೆ ಮಾಹಿತಿ ನೀಡಿದ ಜಲಮಂಡಳಿ ಮುಖ್ಯ ಅಭಿಯಂತರ ಸುರೇಶ್, '2014ರ ಬಳಿಕ ನೀರಿನ ದರದಲ್ಲಿ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಮಂಡಳಿಗೆ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇವೆ' ಎಂದರು.
ಇದನ್ನೂ ಓದಿ:ನಂದಿನಿ ಹಾಲು, ಮೊಸರಿನ ದರ ಏರಿಕೆ ವಿಚಾರ: ನ. 20ರ ನಂತರ ತೀರ್ಮಾನ ಎಂದ ಸಿಎಂ