ದೊಡ್ಡಬಳ್ಳಾಪುರ:ಮೈಸೂರು ಭಾಗದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರು ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಅದನ್ನೇ ಮುಂದುವರಿಸಿದ್ದಾರೆ.
ರವಿ ಡಿ ಚನ್ನಣ್ಣನವರ್ರಿಂದ ಗ್ರಾಮ ವಾಸ್ತವ್ಯ: ಗ್ರಾಮಸ್ಥರು, ಪೊಲೀಸರ ನಡುವೆ ಕಬಡ್ಡಿ ಪಂದ್ಯಾವಳಿ - ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್.ಪಿ ರವಿ ಡಿ. ಚನ್ನಣ್ಣನವರ್ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿಯ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ರು.
![ರವಿ ಡಿ ಚನ್ನಣ್ಣನವರ್ರಿಂದ ಗ್ರಾಮ ವಾಸ್ತವ್ಯ: ಗ್ರಾಮಸ್ಥರು, ಪೊಲೀಸರ ನಡುವೆ ಕಬಡ್ಡಿ ಪಂದ್ಯಾವಳಿ Village stay by Ravi D Channannanavar](https://etvbharatimages.akamaized.net/etvbharat/prod-images/768-512-5739830-thumbnail-3x2-bng.jpg)
ರವಿ ಡಿ ಚನ್ನಣ್ಣನವರ್ರಿಂದ ಗ್ರಾಮ ವಾಸ್ತವ್ಯ
ರವಿ ಡಿ ಚನ್ನಣ್ಣನವರ್ರಿಂದ ಗ್ರಾಮ ವಾಸ್ತವ್ಯ
ಚನ್ನಣ್ಣನವರ್ ಅವರು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡೋ ಮೂಲಕ ಜನರ ಜೊತೆ ಬೆರೆತು ಅವರ ಸಮಸ್ಯೆಗಳನ್ನ ಅಲಿಸಿದ್ರು. ಅವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಜಿಂಕೆ ಬಚ್ಚಹಳ್ಳಿ ಯುವಕರ ತಂಡ ಮತ್ತು ಪೊಲೀಸ್ ತಂಡದೊದಿಗೆ ಕಬಡ್ಡಿ ಪಂದ್ಯಾವಳಿ ನಡೆಸಲಾಯಿತು. ಜಿದ್ದಾಜಿದ್ದನಿಂದ ಕೂಡಿದ ಪಂದ್ಯಾವಳಿಯಲ್ಲಿ 39-41 ಅಂತರದಲ್ಲಿ ಜಿಂಕೆಬಚ್ಚಹಳ್ಳಿ ಯುವಕರ ತಂಡ ಪಂದ್ಯವನ್ನು ಗೆದ್ದು ಬೀಗಿತು. ನಂತರ ಗ್ರಾಮಸ್ಥರ ಜೊತೆ ಊಟ ಸವಿದರು.