ಕರ್ನಾಟಕ

karnataka

ETV Bharat / state

ಆರ್ಬಿಟರ್​​ನಿಂದ ವಿಕ್ರಂ ಲ್ಯಾಂಡರ್ ಬೇರ್ಪಡೆ, ಇನ್ನು ಸಾಫ್ಟ್ ಲ್ಯಾಂಡಿಂಗ್​​ವೊಂದೇ ಬಾಕಿ..!

ಚಂದ್ರಯಾನ-2 ಮತ್ತೊಂದು ಯಶಸ್ಸಿನ ಮೆಟ್ಟಿಲು ಏರಿದ್ದು, ಚಂದ್ರನ ಕಕ್ಷೆಯ ಕೊನೆ ಸುತ್ತು ಮುಗಿಸಿದ ಆರ್ಬಿಟರ್ ವಿಕ್ರಂ ಲ್ಯಾಂಡರ್​ನಿಂದ ಬೇರ್ಪಟ್ಟಿದೆ.

By

Published : Sep 2, 2019, 2:50 PM IST

ಚಂದ್ರಯಾನ-2

ಬೆಂಗಳೂರು:ಇಂದು ಮಧ್ಯಾಹ್ನ 1:15ಗೆ ಚಂದ್ರಯಾನ 2 ಮತ್ತೊಂದು ಯಶಸ್ಸಿನ ಮೆಟ್ಟಿಲು ಏರಿದೆ, ಚಂದ್ರನ ಕಕ್ಷೆಯ ಕೊನೆ ಸುತ್ತು ಮುಗಿಸಿದ ಆರ್ಬಿಟರ್ ವಿಕ್ರಂ ಲ್ಯಾಂಡರ್​ನಿಂದ ಬೇರ್ಪಟ್ಟಿದೆ.

ಆರ್ಬಿಟರ್ ಹಾಗೂ ಲ್ಯಾಂಡರ್​​ನ ಆರೋಗ್ಯವನ್ನು ಹಾಗೂ ಅದರ ಚಲನವಲನವನ್ನು ಬೆಂಗಳೂರು ಬಳಿಯ ಬೇಲಾಳು ಮಿಷನ್ ಆಪರೇಷನ್ ಕಾಂಪ್ಲೆಕ್ಸ್​​ನಿಂದ ಗಮನಿಸಲಾಗುತ್ತಿದೆ. ಲ್ಯಾಂಡರ್ ಮತ್ತು ಆರ್ಬಿಟರ್ ಆರೋಗ್ಯ ಉತ್ತಮವಾಗಿದೆ ಎಂದು ಇದೇ ವೇಳೆ, ಇಸ್ರೋ ಹೇಳಿದೆ.

ಇನ್ನು ಸೆಪ್ಟೆಂಬರ್ 3 ರಂದು ವಿಕ್ರಂ ಮತ್ತೊಂದು ತಿರುವು ಪಡೆಕೊಳ್ಳುತ್ತದೆ. ತದನಂತರ ಚಂದ್ರನ ನೆಲಕ್ಕೆ ಅಪ್ಪಳಿಸಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ.

ABOUT THE AUTHOR

...view details