ಕರ್ನಾಟಕ

karnataka

ETV Bharat / state

ವಿಜ್ಞಾನ​ ಕಾಂಗ್ರೆಸ್ ಸಮಾರೋಪ:​ ವೇದಿಕೆಯಲ್ಲಿ ಉಪರಾಷ್ಟ್ರಪತಿ ಅಂಗರಕ್ಷಕರು ಎಚ್ಚೆತ್ತುಕೊಂಡಿದ್ದೇಕೆ? - Vice President bodyguards alerted at Science Forum

ಸಮಾರೋಪ ಕಾರ್ಯಕ್ರಮದಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್​ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್ ರಂಗಪ್ಪ ಅವರು ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು. ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯೊಂದು ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರ ಹಿಡಿಯುವಂತೆ ಸೂಚಿಸಿದರು.

Vice President bodyguards alerted at Science Forum
ಸೈನ್ಸ್​ ಕಾಂಗ್ರೆಸ್​ ವೇದಿಕೆಯಲ್ಲಿ ಎಚ್ಚೆತ್ತುಕೊಂಡಿಡ ಉಪರಾಷ್ಟ್ರಪತಿ ಅಂಗರಕ್ಷಕರು

By

Published : Jan 7, 2020, 9:42 PM IST

Updated : Jan 8, 2020, 1:11 AM IST

ಬೆಂಗಳೂರು:107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಈ ವೇಳೆ ಉಪರಾಷ್ಟ್ರಪತಿಗಳ ಹಿಂಭಾಗದಲ್ಲಿದ್ದ ಅಂಗರಕ್ಷರು ಒಂದೇ ಬಾರಿ ಎಚ್ಚೆತ್ತುಕೊಂಡರು. ಎಲ್ಲರೂ ಗಾಬರಿಯಿಂದ ಒಂದು ಬಾರಿ ವೇದಿಕೆಯ ಕಡೆಗೆ ಗಮನಿಸುವಂತೆ ಅಲ್ಲಿ ಘಟನೆ ನಡೆಯಿತು.

ಸೈನ್ಸ್​ ಕಾಂಗ್ರೆಸ್​ ವೇದಿಕೆಯಲ್ಲಿ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿ ಅಂಗರಕ್ಷಕರು

ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್​ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್ ರಂಗಪ್ಪ ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು. ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯೊಂದು ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರ ಹಿಡಿಯುವಂತೆ ಸೂಚಿಸಿದರು. ಮತ್ತೊಮ್ಮೆ ಬೆಂಕಿಯ ಜ್ವಾಲೆಯಿಂದ ಅನಾಹುತ ಆಗಬಾರದು ಎಂಬ ಕಾರಣಕ್ಕೆ ಅಂಗರಕ್ಷಕರು ಮತ್ತೆ- ಮತ್ತೆ ದೂರ ಹಿಡಿಯುವಂತೆ ಹೇಳಿದರು.

ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭ

ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು:ಉಪರಾಷ್ಟ್ರಪತಿ ತಮ್ಮ ಸಮಾರೋಪ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಸಭಾಂಗಣದಲ್ಲಿ ನೆರೆದಿದ್ದ ಕನ್ನಡಿಗರ ಮನಗೆದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಎಲ್ಲಾ ಸಭಿಕರಿಗೆ ಕನ್ನಡದಲ್ಲೇ ವಂದನೆ ಸಲ್ಲಿಸಿ ಮಾತು ಆರಂಭಿಸಿದರು. '107ನೇ ವಿಜ್ಞಾನ ಕಾಂಗ್ರೆಸ್​ನಲ್ಲಿ ಭಾಗವಹಿಸಿದ ನನಗೆ ತುಂಬಾ ಸಂತೋಷವಾಗಿದೆ' ಎಂದು ಕನ್ನಡದಲ್ಲಿ ಹೇಳಿದರು.

107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭ

ಮನರಂಜಿಸಿದ ಪೊಲೀಸ್ ಬ್ಯಾಂಡ್:ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಪೊಲೀಸ್ ಬ್ಯಾಂಡ್, ವಿಜ್ಞಾನ ಮೇಳಕ್ಕೆ ಬಂದ ಗಣ್ಯರು, ಸಾರ್ವಜನಿಕರನ್ನು ಮನರಂಜಿಸಿತು. 'ಗಂಧದ ಗುಡಿ' ಸಿನಿಮಾದ 'ನಾವಾಡುವ ನುಡಿಯೆ ಕನ್ನಡ ನುಡಿ' ಹಾಡನ್ನು ಬ್ಯಾಂಡ್ ನಲ್ಲಿ ನುಡಿಸಿದರು.

Last Updated : Jan 8, 2020, 1:11 AM IST

For All Latest Updates

ABOUT THE AUTHOR

...view details