ನೆಲಮಂಗಲ: ಕನ್ನಡ ಹಿರಿಯ ನಟಿ ಡಾ.ಲೀಲಾವತಿ ಅವರದ್ದು ಭಗವಂತನ ಹೃದಯ, ತಾವು ವಾಸಿಸುವ ಜನರ ಕಷ್ಟಗಳಿಗೆ ಮಿಡಿಯುವ ಮನಸ್ಸು, ತಮಗೆ ಬರುವ ಅಲ್ಪ ಆದಾಯದಲ್ಲಿ ಸಾರ್ವಜನಿಕ ಆಸ್ಪತ್ರೆ ಕಟ್ಟಿಸಿದ್ದರು. ಈಗ ಮೂಕ ಪ್ರಾಣಿಗಳ ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಪಶು ವೈದಕೀಯ ಆಸ್ಪತ್ರೆಯನ್ನ ನಿರ್ಮಾಣ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸ್ಪತ್ರೆಯನ್ನ ಇಂದು ಉದ್ಘಾಟನೆ ಮಾಡಿದರು.
ಲೀಲಾವತಿಯವರ ಮಗ ವಿನೋದ್ ರಾಜ್ ತಮ್ಮ ತಾಯಿ ಅವರು ಮೂಕ ಪ್ರಾಣಿಗಳ ಮೇಲಿನ ಪ್ರೀತಿಯನ್ನ ಬಿಚ್ಚಿಟ್ಟರು, ಲೀಲಾವತಿ ಅಮ್ಮನವರಿಗೆ ಮನುಷ್ಯರಿಗಿಂತ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚು, ಚೆನೈನ ಟಿ.ನಗರದಲ್ಲಿ ವಾಸವಾಗಿದ್ದಾಗ ತಮಗೆ ತಿನ್ನಲು ಇಲ್ಲದಿದ್ದ ಸಮಯದಲ್ಲೂ ಮನೆಯಲ್ಲಿ ಬೆಕ್ಕು ನಾಯಿಗಳನ್ನ ಸಾಕಿಕೊಂಡಿದ್ರು. ಶೂಟಿಂಗ್ ಮುಗಿಸಿ ಮನೆಗೆ ಬಂದ ನಂತರ ಅವುಗಳಿಗೆ ಊಟ ಮಾಡಿಸಿ ಹಾಕಿದ ನಂತರನೇ ತಾವು ಊಟ ಮಾಡುತ್ತಿದ್ದರು. ಸದ್ಯ ನಮ್ಮ ತೋಟದಲ್ಲಿ 12 ನಾಯಿಗಳನ್ನ ಸಾಕಿದ್ದಾರೆ.
ತಮ್ಮನ್ನು ನಂಬಿದವರಿಗೆ ಊಟ ಹಾಕಬೇಕು ಆಶ್ರಯ ನೀಡಬೇಕು ಎಂಬುದು ಅವರ ಆಸೆ, ಆ ನಿಟ್ಟಿನಲ್ಲಿ , ಅದನ್ನ ಮಾಡುವುದಕ್ಕೆ ಭಗವಂತ ಸಹ ಯಾವುದೇ ತೊಂದರೆಯನ್ನ ನಮ್ಮ ತಾಯಿಗೆ ಕೊಟ್ಟಿಲ್ಲ, ತಮಗೆ ಬರುತ್ತಿದ್ದ ಅಲ್ಪ ಆದಾಯದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ರು, ಸಾಮಾಜಿಕ ಸೇವೆ ಮಾಡುವ ಮುನ್ನ ನನ್ನ ಬಳಿ ಚರ್ಚೆ ಮಾಡಿದ ನಂತರ ಸೇವೆಯಲ್ಲಿ ತೊಡಗಿದ್ದರು.