ಕರ್ನಾಟಕ

karnataka

By

Published : May 12, 2023, 6:46 PM IST

ETV Bharat / state

ವಿಧಾನಸಭಾ ಚುನಾವಣಾ ಫಲಿತಾಂಶ: ಮತ ಎಣಿಕಾ ಕೇಂದ್ರಗಳ ಸುತ್ತ ವಾಹನ ಸಂಚಾರ, ನಿಲುಗಡೆಗೆ ನಿರ್ಬಂಧ

ಮತ ಎಣಿಕಾ ಕಾರ್ಯ ಮುಕ್ತಾಯವಾಗುವವರೆಗೂ ಕೆಲ ಸಂಚಾರ ಮಾರ್ಪಾಡು ಮತ್ತು ವಾಹನ ನಿಲುಗಡೆ ನಿಷೇಧಿಸಿ ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರು
ಬೆಂಗಳೂರು ಸಂಚಾರ ಪೊಲೀಸರು

ಬೆಂಗಳೂರು :ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ ಹಿನ್ನೆಲೆ ಎಣಿಕಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 06:00 ಗಂಟೆಯಿಂದ ಎಣಿಕಾ ಕಾರ್ಯ ಮುಕ್ತಾಯವಾಗುವವರೆಗೂ ಕೆಲ ಸಂಚಾರ ಮಾರ್ಪಾಡು ಹಾಗೂ ವಾಹನ ನಿಲುಗಡೆ ನಿಷೇಧಿಸಿ ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆ ತಿಳಿಸಿದೆ.

1 - ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ & ಕಾಂಪೋಸಿಟ್ ಪಿಯು ಕಾಲೇಜ್, ವಿಠಲ್ ಮಲ್ಯ ರಸ್ತೆಯ ಸುತ್ತಮುತ್ತಲಿನ ಕಸ್ತೂರಬಾ ರಸ್ತೆಯ ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಎಲ್ಲ ರೀತಿಯ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಬದಲಿಯಾಗಿ ವಾಹನ ಸವಾರರರು ಲ್ಯಾವೆಲ್ಲೆ ರಸ್ತೆ/ಎಂ.ಜಿ ರಸ್ತೆ ಮುಖಾಂತರ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಕ್ಲೀನ್ಸ್ ವೃತ್ತದ ಕಡೆಗೆ ಚಲಿಸಬಹುದಾಗಿದೆ.ಆರ್.ಆರ್.ಎಂ.ಆರ್ ರಸ್ತೆ ಹಾಗೂ ಕಸ್ತೂರ ಬಾ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆಗೆ ಅವಕಾಶವಿರಲಿದೆ.

2 - ಮೌಂಟ್ ಕಾರ್ಮಲ್‌ ಕಾಲೇಜು, ಪ್ಯಾಲೇಸ್ ರಸ್ತೆ, ವಸಂತ ನಗರ, ಪ್ಯಾಲೇಸ್ ರಸ್ತೆಯ ಕಲ್ಪನ ಜಂಕ್ಷನ್‌ನಿಂದ ವಸಂತನಗರದ ಅಂಡರ್ ಪಾಸ್ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಚಕ್ರವರ್ತಿ ಲೇಔಟ್ ಕಡೆಯಿಂದ ಬರುವ ವಾಹನಗಳು ವಸಂತನಗರದ ಕಡೆಗೆ ಮತ್ತು ಉದಯ ಟಿ. ವಿ ಜಂಕ್ಷನ್ ಕಡೆಯಿಂದ ಬಿಡಿಎ ಕಡೆಗೆ ಚಲಿಸಬಹುದಾಗಿರುತ್ತದೆ. ಎಂ. ವಿ ಜಯರಾಮ್ ರಸ್ತೆಯನ್ನ ಬಳಸಬಹುದಾಗಿರುತ್ತದೆ. ಪ್ಯಾಲೇಸ್ ರಸ್ತೆ ಮತ್ತು ಓಲ್ಡ್‌ ಹೈಗ್ರೌಂಡ್ ಜಂಕ್ಷನ್‌ನಿಂದ ಕಲ್ಪನಾ ಜಂಕ್ಷನ್‌ ವರೆಗೆ ಹಾಗೂ ಕಲ್ಪನಾ ಜಂಕ್ಷನ್ ನಿಂದ ಚಂದ್ರಿಕಾ ಹೋಟೆಲ್ ವರೆಗೆ ವಾಹನ ನಿಲುಗಡೆಗೆ ನಿರ್ಬಂಧವಿರಲಿದ್ದು, ಅರಮನೆ ಮೈದಾನದಲ್ಲಿ ವಾಹನ ನಿಲ್ಲಿಸಬಹುದಾಗಿರುತ್ತದೆ.

3 - ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜ್, ಜಯನಗರ, ಎಸ್.ಎಸ್.ಎಂ.ಆರ್.ವಿ ಕಾಲೇಜಿನ ಸಮೀಪದ ರಸ್ತೆಗಳಾದ 36 ನೇ ಕ್ರಾಸ್ ರಸ್ತೆ, 22 ನೇ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ ಮತ್ತು 28 ನೇ ಮುಖ್ಯ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಈಸ್ಟ್ ಎಂಡ್ ಮುಖ್ಯ ರಸ್ತೆ, 32ನೇ ಇ ಕ್ರಾಸ್ ರಸ್ತೆ, 39ನೇ‌ ಕ್ರಾಸ್ ರಸ್ತೆ, 18ನೇ ಮುಖ್ಯರಸ್ತೆಗಳನ್ನ ಬಳಸಬಹುದಾಗಿದೆ.

ಬಿಎಂಟಿಸಿ ಬಸ್​ಗಳು 18 ನೇ ಮುಖ್ಯ ರಸ್ತೆ, 32ನೇ ಇ ಕ್ರಾಸ್ ರಸ್ತೆ ಜಂಕ್ಷನ್‌ನಿಂದ ಜಯನಗರ ಜನರಲ್ ಆಸ್ಪತ್ರೆ ಕಡೆಗೆ ತೆರಳಿ 2 ನೇ ಮುಖ್ಯ ರಸ್ತೆ ಜಂಕ್ಷನ್​ನಿಂದ ಬಲ ತಿರುವು ಪಡೆದು ಜಯನಗರ ಬಸ್ ಡಿಪೋ ತಲುಪಬಹುದು. ಉಳಿದಂತೆ ಎಲ್ಲ ಬಿಎಂಟಿಸಿ ಬಸ್​ಗಳು 18 ನೇ ಮುಖ್ಯ ರಸ್ತೆ ಅಥವಾ 32 ನೇ ಇ ಕ್ರಾಸ್ ರಸ್ತೆ ಮುಖಾಂತರ ಸಂಚರಿಸಿ, ಈಸ್ಟ್ ಎಂಡ್ ಮುಖ್ಯ ರಸ್ತೆ ಮತ್ತು 39 ನೇ ಕ್ರಾಸ್‌ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.

ಆರ್ ವಿ ಕಾಲೇಜ್ ಮೈದಾನದಲ್ಲಿ ವಾಹನಗಳ ನಿಲುಗಡೆ: ಮತ ಎಣಿಕಾ ಕೇಂದ್ರಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧವಿರಲಿದ್ದು, ಜಯನಗರ 11 ನೇ ಮುಖ್ಯರಸ್ತೆಯಲ್ಲಿರುವ ಶಾಲಿನಿ ಮೈದಾನದಲ್ಲಿ ಮತ್ತು ಆರ್ ವಿ ಕಾಲೇಜ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

4 - ಬಿ.ಎಂ.ಎಸ್ ಮಹಿಳಾ ಕಾಲೇಜು, ಬಸವನಗುಡಿ, ಹಯವದನ ಕ್ರಾಸ್ ನಿಂದ ಕಾಮತ್ ಹೋಟೆಲ್ ಜಂಕ್ಷನ್‌ ವರೆಗೆ, ಬುಲ್ ಟೆಂಪಲ್‌ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ರಾಮಕೃಷ್ಣ ಆಶ್ರಮ ಜಂಕ್ಷನ್‌ನಿಂದ ಹಳ್ಳಿತಿಂಡಿ (ದೊಡ್ಡಗಣಪತಿ ದೇವಸ್ಥಾನದ) ಕಡೆಗೆ ಸಂಚರಿಸುವ ವಾಹನಗಳು ರಾಮಕೃಷ್ಣ ಆಶ್ರಮದ ಹತ್ತಿರ ಬಲ ತಿರುವು ಪಡೆದು ಹಯವದನರಾವ್ (ಅಕ್ಕೂರುಮಠ ರಸ್ತೆ) ರಸ್ತೆಯ ಮುಖಾಂತರ ಹನುಮಂತನಗರದ ಕಡೆಗೆ ಸಂಚರಿಸಬಹುದಾಗಿದೆ.

ಎನ್ ಆರ್ ಕಾಲೋನಿ ಕಡೆಯಿಂದ ಬುಲ್ ಟೆಂಪಲ್​ಗೆ ಸಂಚರಿಸುವ ವಾಹನಗಳು ಕಾಮತ್ ಯಾತ್ರಿ ನಿವಾಸ್ ಜಂಕ್ಷನ್ ಬಳಿ ಎಡ ತಿರುವು ಮತ್ತು ಬಲ ತಿರುವು ಪಡೆದುಕೊಂಡು ಅಶೋಕನಗರ 2ನೇ ಕ್ರಾಸ್ ಎ.ಪಿ.ಎಸ್ ಕಾಲೇಜ್ ರಸ್ತೆ ಮುಖಾಂತರ ಸಂಚರಿಸಬಹುದು. ಹೋಂ ಸ್ಕೂಲ್ ಕಡೆಯಿಂದ ಹಳ್ಳಿ ತಿಂಡಿ ಕಡೆಗೆ ಸಂಚರಿಸುವ ವಾಹನಗಳು ಟ್ಯಾಗೋರ್ ಸರ್ಕಲ್ ಬಳಿ ಎಡ ತಿರುವು ಮತ್ತು ಬಲ ತಿರುವು ಪಡೆದುಕೊಂಡು ನೆಟ್ಟಕಲ್ಲಪ್ಪ ಸರ್ಕಲ್ ಹಾಗೂ ನ್ಯಾಷನಲ್ ಕಾಲೇಜ್ ಕಡೆ ಚಲಿಸಬಹುದಾಗಿದೆ.

ಹಯವದನ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ:ಬಸವನಗುಡಿ ರಸ್ತೆ, ಡಿವಿಜಿ ರಸ್ತೆ, ಬ್ಯೂಗಲ್ ರಾಕ್‌ ರಸ್ತೆ, ರಾಮಕೃಷ್ಣ ಆಶ್ರಮ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧವಿರಲಿದ್ದು, ಬಸವನಗುಡಿ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಹಾಗೂ ಉದಯಭಾನು ಆಟದ ಮೈದಾನ, ಕೋಹಿನೂರು ಆಟದ ಮೈದಾನದಲ್ಲಿ ಹಯವದನ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿರಲಿದೆ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಬರುತ್ತೆ, ಅತಂತ್ರ ಫಲಿತಾಂಶ ಬರಲ್ಲ: ಸತೀಶ್​ ಜಾರಕಿಹೊಳಿ ವಿಶ್ವಾಸ

5 - ಆಕಾಶ್ ಇಂಟರ್‌ನ್ಯಾಷನಲ್ ಸ್ಕೂಲ್ ದೇವನಹಳ್ಳಿ‌, ದೇವನಹಳ್ಳಿ ಬೈಪಾಸ್ ನಿಂದ ದೇವನಹಳ್ಳಿ ಹೊಸ ಬಸ್ ನಿಲ್ದಾಣದ ನಡುವೆ, ಹೊಸ ಬಸ್‌ ನಿಲ್ದಾಣದ ಬೈಪಾಸ್‌ ವರೆಗೆ ಹಾಗೂ ದೇವನಹಳ್ಳಿ ಗಿರಿಯಮ್ಮ ಸರ್ಕಲ್ ನಿಂದ ಬೈಚಾಪುರ ಗ್ರಾಮದವರೆಗೆ ಸಂಚಾರ ನಿರ್ಬಂಧವಿರಲಿದೆ. ಪರ್ಯಾಯವಾಗಿ ಸೂಲಿಬೆಲೆ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ (ರಾಣಿ ಕ್ರಾಸ್ ಕಡೆಗೆ) ಎನ್. ಹೆಚ್ 648 ಮೂಲಕ, ರಾಣಿ ಕ್ರಾಸ್ ನಿಂದ ಸೂಲಿಬೆಲೆ ಕಡೆಗೆ ಎನ್.ಹೆಚ್ 648 ಮೂಲಕ, ದೊಡ್ಡಬಳ್ಳಾಪುರ ಕಡೆಯಿಂದ ಹೊಸಕೋಟೆ ತಲುವವರು, ವಿಜಯಪುರ ಜಂಕ್ಷನ್, ವಿಜಯಪುರ ಎನ್.ಹೆಚ್. 648 ಜಂಕ್ಷನ್, ಏರ್ ಲೈನ್ಸ್ ಡಾಬಾ ಮೂಲಕ ಹಾಗೂ ಕಡೆಯಿಂದ ಬರುವವರು ಏರ್ ಲೈನ್ಸ್ ಡಾಟಾ ಮೂಲಕ ಎನ್.ಹೆಚ್ 648 ಚಲಿಸಿ ರಾಣಿ ಕ್ರಾಸ್‌ ಮೂಲಕ ಚಲಿಸಬಹುದಾಗಿದೆ.

ಮತ ಎಣಿಕೆ ಕೇಂದ್ರ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧವಿರಲಿದ್ದು, ಟಿಪ್ಪು ಸರ್ಕಲ್ ನಿಂದ ಆಸ್ಪತ್ರೆಯವರೆಗೆ, ಬೈಚಾಪುರ ರಸ್ತೆ ಎಡಭಾಗದ ಲೇ ಔಟ್, ಬೈಪಾಸ್‌ ಜಂಕ್ಷನ್‌, ದೇವನಹಳ್ಳಿ ಕೋಟೆ ಕ್ರಾಸ್, ಜಂಕ್ಷನ್‌ಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೇನೆ, ಈಗ ನನಗೆ ಹಿರಿ-ಕಿರಿಯರ ಸಹಕಾರ ಸಿಗುವ ವಿಶ್ವಾಸ ಇದೆ: ಡಿಕೆಶಿ

ABOUT THE AUTHOR

...view details