ಕರ್ನಾಟಕ

karnataka

By

Published : Dec 6, 2019, 7:16 PM IST

ETV Bharat / state

ಪೊಲೀಸ್ ಆಯುಕ್ತ ಸಜ್ಜನರಗೆ ವೀರಶೈವ ಮಹಾಸಭೆ ಅಭಿನಂದನೆ

ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಕಾರ್ಯವನ್ನು ಅಖಿಲಭಾರತ ವೀರಶೈವ ಮಹಾಸಭೆ ಯುವ ಘಟಕದ ಮಾಜಿ ಅಧ್ಯಕ್ಷ ಉಮೇಶ್ ಪಾಟೀಲ್ ಶ್ಲಾಘಿಸಿದ್ದಾರೆ.

ಎನ್​ಕೌಂಟರ್​ ಸ್ಪೆಷಲಿಸ್ಟ್​ ವಿಶ್ವನಾಥ್ ಸಜ್ಜನರ್
ಎನ್​ಕೌಂಟರ್​ ಸ್ಪೆಷಲಿಸ್ಟ್​ ವಿಶ್ವನಾಥ್ ಸಜ್ಜನರ್

ಬೆಂಗಳೂರು : ಪಶುವೈದ್ಯೆ ಮೇಲೆ ಅತ್ಯಾಚಾರಗೈದು ಅಮಾನವೀಯವಾಗಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿರುವ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಕಾರ್ಯವನ್ನು ಅಖಿಲಭಾರತ ವೀರಶೈವ ಮಹಾಸಭಾದ ಯುವ ಘಟಕದ ಮಾಜಿ ಅಧ್ಯಕ್ಷ ಉಮೇಶ್ ಪಾಟೀಲ್ ಶ್ಲಾಘಿಸಿದ್ದಾರೆ.

ಎನ್​ಕೌಂಟರ್​ ಸ್ಪೆಷಲಿಸ್ಟ್​ ವಿಶ್ವನಾಥ್ ಸಜ್ಜನರ ಅಭಿನಂದನಾ ಪತ್ರ

ತೆಲಂಗಾಣದಲ್ಲಿ ಎನ್​ಕೌಂಟರ್ ಸ್ಪೆಷೆಲಿಸ್ಟ್ ಎಂದೇ ಖ್ಯಾತರಾಗಿರುವ ವಿಶ್ವನಾಥ್ ಸಜ್ಜನರ ಹುಬ್ಬಳ್ಳಿಯವರು ಎನ್ನುವುದು ನಮ್ಮ ಹೆಮ್ಮೆಯನ್ನು ಹೆಚ್ಚಿಸುವಂತೆ ಮಾಡಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದ ಆರೋಪಿಗಳಿಗೆ ಒಂದೇ ವಾರದಲ್ಲಿ ದೇಶದ ಜನರು ಬಯಸುವ ಶಿಕ್ಷೆ ನೀಡುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅಭಿನಂದನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details