ಕರ್ನಾಟಕ

karnataka

ETV Bharat / state

ಅವನ್​ ಬಿಟ್ಟು ಇವನ್​​ ಬಿಟ್ಟು ಇವರ್ಯಾರು:  ಕೈ ಕೊಟ್ಟ ಎರಡೇ ದಿನದಲ್ಲಿ ಕಮಲ ಬಿಟ್ಟು 'ಕೈ' ಹಿಡಿದ ವಸಂತ.. - Vasanth kumar congres

ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್​​ ಬಿಟ್ಟು ಬಿಜೆಪಿ ಸೇರಿದ್ದ ವಸಂತ ಕುಮಾರ್​​, ಈಗ ಮತ್ತೆ ಮರಳಿ ಗೂಡಿಗೆ ಎಂಬಂತೆ ಕಾಂಗ್ರೆಸ್​​ಗೆ ಹಿಂತಿರುಗಿದ್ದಾರೆ.

Vasanth kumar came back
'ಕೈ' ಹಿಡಿದ ವಸಂತ

By

Published : Dec 5, 2019, 11:05 AM IST

Updated : Dec 5, 2019, 1:48 PM IST

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಸಂಪಗಿರಾಮನಗರ ವಾರ್ಡ್‌ನ ಬಿಬಿಎಂಪಿ ಸದಸ್ಯ ವಸಂತ್ ಕುಮಾರ್ ಎರಡು ದಿಗಳ ಹಿಂದಷ್ಟೇ 'ಕೈ' ಕೊಟ್ಟು ಕಮಲ ಹಿಡಿದಿದ್ದರು. ಈಗ ಮತ್ತೆ ತವರಿಗೆ ಮರಳಿದ್ದಾರೆ.

ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದ ವಸಂತ್​ ಕುಮಾರ್​​, ಇದೀಗ ಯೂ ಟರ್ನ್​ ಹೊಡೆದಿದ್ದು, ನನ್ನನ್ನು ಸಿಎಂ ನಿವಾಸಕ್ಕೆ ಕರೆದೊಯ್ಯದು ಅಚಾನಕ್​​ ಆಗಿ ಬಿಜೆಪಿಗೆ ಸೇರಿಸಿದ್ದರು ಎಂದು ಕೇಸರಿ ಪಡೆ ವಿರುದ್ಧ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ದಿನೇಶ್​ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಬಿಜೆಪಿಯವರು ಮಾಡುತ್ತಿರುವುದ ಏನು ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ನಮ್ಮ ಪಕ್ಷದವರನ್ನು ಬೇಟೆಯಾಡುವುದೇ ಅವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸಂತ ಕುಮಾರ್ ಪ್ರತಿಕ್ರಿಯೆ

ಬಿಜೆಪಿ ನಾಯಕರ ಮೇಲೆ ನಂಬಿಕೆ ಇಲ್ಲದ ಕಾರಣದಿಂದಲೇ ವಸಂತ್​ ಕುಮಾರ್​​ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದು, ಬಿಜೆಪಿಯವರು ಭೇಟೆಯಾಡುವುದನ್ನು ಬಿಟ್ಟು ಅವರ ಕೆಲಸ ಅವರು ಮಾಡಲಿ ಎಂದಿದ್ದಾರೆ.

ಇನ್ನು ಮೊನ್ನೆ ದಿಢೀರ್​ ಆಗಿ ವಸಂತ್​ ಕುಮಾರ್​ ಪಕ್ಷ ತೊರೆದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕಂಗಾಲಾಗಿ ಗಳಗಳನೆ ಅತ್ತಿದ್ದರು. ವಸಂತ್ ಕುಮಾರ್​ ನಡೆಯಿಂದ ಅರ್ಷದ್​ ಕಳವಳಕ್ಕೀಡಾಗಿದ್ದರು. ವಸಂತ ಕುಮಾರ್​ ಅರ್ಷದ್​ ಅವರ ಕಟ್ಟಾ ಬೆಂಬಲಿಗರಾಗಿದ್ದರು.
Last Updated : Dec 5, 2019, 1:48 PM IST

ABOUT THE AUTHOR

...view details