ಕರ್ನಾಟಕ

karnataka

ETV Bharat / state

ವೈಕುಂಠ ಏಕಾದಶಿ : ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ, ನಟಿ ಸುಧಾರಾಣಿ ಚಾಲನೆ - ವೆಂಕಟೇಶ್ವರನ ದೇವಾಲಯ

ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಲಿದ್ದು, ನಗರದಲ್ಲಿರುವ ವೆಂಕಟೇಶ್ವರನ ದೇವಾಲಯಕ್ಕೆ ಭಕ್ತ ಸಾಗರವೆ ಹರಿದು ಬರಲಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲು ಸುಮಾರು 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಈ ವಿತರಣಾ ಕಾರ್ಯಕ್ಕೆ ಚಿತ್ರನಟಿ ಸುಧಾರಣಿಯವರು ಚಾಲನೆ ನೀಡಿದರು.

ವೈಕುಂಠ ಏಕಾದಶಿ
Vaikunta Ekadashi special

By

Published : Jan 6, 2020, 8:39 AM IST

ಯಲಹಂಕ :ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದಲ್ಲಿರುವ ವೆಂಕಟೇಶ್ವರನ ದೇವಾಲಯಕ್ಕೆ ಭಕ್ತ ಸಾಗರವೆ ಹರಿದು ಬರಲಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲು ಸುಮಾರು 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಈ ವಿತರಣಾ ಕಾರ್ಯಕ್ಕೆ ಚಿತ್ರನಟಿ ಸುಧಾರಣಿಯವರು ಚಾಲನೆ ನೀಡಿದರು.

ವೈಕುಂಠ ಏಕಾದಶಿ ಹಿನ್ನೆಲೆ

ಯಲಹಂಕದ ಅರ್ನಾ ಸೇವಾ ಟ್ರಸ್ಟ್ ವತಿಯಿಂದ 2 ಲಕ್ಷ ಲಡ್ಡುಗಳನ್ನು ತಯಾರಿಸಿದ್ದು, ನಗರದಲ್ಲಿರುವ ಸುಮಾರು 3 ಸಾವಿರ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲು ತಯಾರಿಸಲಾಗಿದೆ. ಈ ವಿತರಣಾ ಕಾರ್ಯಕ್ರಮಕ್ಕೆ ಅರ್ನಾ ಸೇವಾ ಟ್ರಸ್ಟ್​ನ ಅಧ್ಯಕ್ಷರಾದ ಕೇಶವ ರಾಜಣ್ಣರವರು ಮತ್ತು ಚಿತ್ರನಟಿ ಸುಧಾರಾಣಿರವರು ಚಾಲನೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸುಧಾರಾಣಿ, ವೈಕುಂಠ ಏಕಾದಶಿಯ ದಿನದಂದು ಶ್ರೀನಿವಾಸನ ದೇವಸ್ಥಾನದಲ್ಲಿ ವಿತರಿಸುವ ಲಡ್ಡುಗಳನ್ನು ಪವಿತ್ರ ಪ್ರಸಾದ ಎಂದು ಭಕ್ತರು ನಂಬಿದ್ದಾರೆ. ಸತತ 27 ವರ್ಷದಿಂದ ಅರ್ನಾ ಸೇವಾ ಟ್ರಸ್ಟ್ ಈ ಕಾರ್ಯ ನಡೆಸಿಕೊಂಡು ಬರುತ್ತಿದೆ. ಇದು ಉತತಮವಾದ ವಿಚಾರ. ಹೀಗೆ ಇವರ ಕಾರ್ಯ ಮುಂದುವರೆಯಲಿ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ಅರ್ನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ರಾಜಣ್ಣ ಮಾತನಾಡಿ, ಸುಮಾರು 27 ವರ್ಷದಿಂದ ಲಾಡು ವಿತರಣೆ ಕಾರ್ಯ ಮಾಡುತ್ತಿದ್ದು,ಈ ವರ್ಷ 2 ಲಕ್ಷ ಲಡ್ಡು ವಿತರಣೆಯ ಬೃಹತ್ ಯೋಜನೆ ಹಾಕಿಕೊಳ್ಳಲಾಗಿದೆ. ಲಡ್ಡು ತಯಾರಿಗಾಗಿ ಒಂದು ವಾರದಿಂದ 100 ಜನ ಬಾಣಸಿಗರ ತಂಡ ಶ್ರಮಿಸಿದೆ. ಎಲ್ಲರಿಗೂ ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಮಾಡುವ ಸಾಧ್ಯವಿಲ್ಲ. ಹೀಗಾಗಿ ನಗರದ ಪ್ರದೇಶ ಮತ್ತು ನೂರಕ್ಕು ಹೆಚ್ಚು ಹಳ್ಳಿಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತವಾಗಿ ಶ್ರೀನಿವಾಸ ಪ್ರಿಯವಾದ ಲಡ್ಡುವನ್ನು ದೇವಸ್ಥಾನಗಳಿಗೆ ವಿತರಣೆ ಮಾಡಲಾಗುವುದು ಎಂದರು.

ABOUT THE AUTHOR

...view details