ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಡಿಸಿಪಿ ಕಚೇರಿಯಲ್ಲಿ ದೂರು ದಾಖಲು - ಮುಖ್ಯಮಂತ್ರಿ ಬೊಮ್ಮಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಯೂಟ್ಯೂಬ್ ಚಾನಲ್​​ವೊಂದರಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಕೇಂದ್ರ ಡಿಸಿಪಿ ಕಚೇರಿಗೆ ದೂರು ದಾಖಲಾಗಿದೆ..

Using of Abusive words to CM Bommai : Complaint to DCP office
ಸಿಎಂ ಬೊಮ್ಮಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಿನ್ನೆಲೆ ದೂರು ದಾಖಲು

By

Published : Mar 26, 2022, 12:05 PM IST

ಬೆಂಗಳೂರು :ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಕೇಂದ್ರ ಡಿಸಿಪಿ ಕಚೇರಿಗೆ ದೂರು ಸಲ್ಲಿಕೆಯಾಗಿದೆೆ. ಆರೋಪಿಯನ್ನು ಬಂಧಿಸಲು ಕನ್ನಡಪರ ಸಂಘಟನೆಗಳಿಂದ ಕೂಗು ಕೇಳಿ ಬರುತ್ತಿದೆ.

ದೂರಿನ ಪ್ರತಿ

ಹೊಳೆನರಸೀಪುರ ನಿವಾಸಿ ಶಾಬಾಝ್ ಉಲ್ಲಾಖಾನ್ ಯೂಟ್ಯೂಬ್ ಚಾನಲ್​​ವೊಂದರಲ್ಲಿ ಮುಖ್ಯಮಂತ್ರಿಯವರ ಬಗ್ಗೆ ಕೀಳು ಶಬ್ದಗಳಿಂದ ನಿಂದಿಸಿದ್ದಾನೆ. ಪಾಕಿಸ್ತಾನದಿಂದ ಕರೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಕುರಿತು ಕನ್ನಡಪರ ಸಂಘಟನೆಯ ಭರತ್ ಶೆಟ್ಟಿ ಡಿಸಿಪಿ ಅನುಚೇತ್ ಕಚೇರಿಗೆ ದೂರಿನ ಪ್ರತಿ ತಲುಪಿಸಿದ್ದಾರೆ. ಸಮಾಜ ಘಾತುಕ ಹೇಳಿಕೆ ನೀಡಿ, ಮುಖ್ಯಮಂತ್ರಿಗಳನ್ನು ಕೀಳು ಶಬ್ದದಲ್ಲಿ ನಿಂದಿಸಿದ್ದ ಶಾಬಾಝ್ ಖಾನ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಆಸ್ಟರ್ ಆಸ್ಪತ್ರೆಯಿಂದ ರಾಮಯ್ಯ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ರವಾನೆ

ABOUT THE AUTHOR

...view details