ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು: ಕೊಚ್ಚಿ ಹೋದ ಚಿನ್ನಾಭರಣ!

ಕಳೆದ ಎರಡು ದಿನಗಳಿಂದ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮಳೆ ನೀರು ಆಭರಣದ ಅಂಗಡಿಗೆ ನುಗ್ಗಿ, ಚಿನ್ನಾಭರಣಕ್ಕೆ ಹಾನಿಯಾದ ಘಟನೆ ನಿನ್ನೆ ನಡೆದಿದೆ.

By

Published : May 23, 2023, 7:05 AM IST

Updated : May 23, 2023, 8:14 AM IST

ಜ್ಯುವೆಲ್ಲರಿಸ್​ಗೆ ನುಗ್ಗಿದ ಮಳೆ ನೀರು
ಜ್ಯುವೆಲ್ಲರಿಸ್​ಗೆ ನುಗ್ಗಿದ ಮಳೆ ನೀರು

ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು

ಬೆಂಗಳೂರು: ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ನಗರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಲ್ಲೇಶ್ವರದ 9ನೇ ಕ್ರಾಸ್‌ನಲ್ಲಿ ನಿಹಾನ್ ಜ್ಯುವೆಲ್ಲರಿ ಅಂಗಡಿಗೆ ಮಳೆ ನೀರು ನುಗ್ಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗುತ್ತಿದೆ. ಕಸಸಮೇತ ನೀರು ರಭಸವಾಗಿ ಒಳ ನುಗ್ಗಿದ್ದು ಅಲ್ಲಿದ್ದ ಸಿಬ್ಬಂದಿಗೆ ಅಂಗಡಿ ಶಟರ್ ಹಾಕಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಮಳಿಗೆ ಒಡತಿಯ ಪ್ರತಿಕ್ರಿಯೆ: ಅಂಗಡಿ ಸಮೀಪ ನಡೆಯುತ್ತಿರುವ ಕಾಮಗಾರಿ ಈ ಅವಾಂತರಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. "ಅಂಗಡಿಯಲ್ಲಿದ್ದ ಚಿನ್ನಾಭರಣಗಳು ಒದ್ದೆಯಾಗಿವೆ. ಘಟನೆಯನ್ನು ಪಾಲಿಕೆಯವರಿಗೆ ಕರೆ ಮಾಡಿ ತಿಳಿಸಿ ಸಹಾಯ ಕೇಳಿದ್ದು, ಅಧಿಕಾರಿಗಳು ನಮ್ಮ ನೆರವಿಗೆ ಬಂದಿಲ್ಲ. ನಮಗೆ ಶೇ.80ರಷ್ಟು ಆಭರಣ ನಷ್ಟವಾಗಿದೆ. ನಮ್ಮ ಕಣ್ಮುಂದೆ ಸುಮಾರು 2 ಕೋಟಿ ರೂ ಮೌಲ್ಯದ ಆಭರಣಗಳು ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ" ಎಂದು ಮಳಿಗೆಯ ಒಡತಿ ಪ್ರಿಯಾ ಕಣ್ಣೀರಿಟ್ಟರು.

ಎರಡು ದಿನದ ಮಳೆಯಿಂದಾಗಿ ನಗರದ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು ವಿಲೇವಾರಿಗೆ ಪೌರ ಕಾರ್ಮಿಕರು ಕೂಡಾ ಪರದಾಟ ನಡೆಸುತ್ತಿದ್ದಾರೆ. ಹಲವು ಪ್ರಮುಖ ರಸ್ತೆಗಳು ತಿಪ್ಪೆ ಗುಂಡಿಯಾಗಿ ಮಾರ್ಪಟ್ಟಿವೆ. ಮರ ಬಿದ್ದಿರುವ ಸಂಬಂಧ ಬಿಬಿಎಂಪಿಗೆ 600 ಕ್ಕೂ ಅಧಿಕ ದೂರುಗಳು ಬಂದಿವೆ. ಮಹಾಲಕ್ಷ್ಮಿ ಲೇಔಟ್‌ನಲ್ಲೇ 20 ಕ್ಕೂ ಅಧಿಕ ಕಡೆ ಮನೆಗಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಮಳೆ ಅಬ್ಬರ:ಎಲೆಕ್ಟ್ರಾನಿಕ್​ ಸಿಟಿಯಲ್ಲಿ ಅಬ್ಬರಿಸಿದ ಗಾಳಿಸಮೇತ ಮಳೆ ಸೋಮವಾರವೂ ಮುಂದುವರಿಯಿತು. ಸಂಜೆ 6.30ಕ್ಕೆ ಶುರುವಾದ ಆಲಿಕಲ್ಲು ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದಾಗಿ ರಸ್ತೆಗಳೆಲ್ಲ ಹೊಳೆ ರೂಪ ತಾಳಿದ್ದವು. ನೀರಿನ ರಭಸಕ್ಕೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ವಾಹನ ಸವಾರರು ಪರದಾಡಿದರು. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿತು. ಮನೆಯಲ್ಲಿದ್ದ ದಿನ ಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್​ ವಸ್ತುಗಳು ನೀರು ಪಾಲಾದವು.

ಕೊಟ್ಟಿಗೆಹಳ್ಳಿಯಲ್ಲಿ ಅಧಿಕ ಮಳೆ:ಕೊಟ್ಟಿಗೆಹಳ್ಳಿಯಲ್ಲಿ 70 ಮಿ ಮೀ ಮಳೆ ಬಿದ್ದಿದೆ. ದೊಡ್ಡತೂಗೂರು 42 ಮಿ ಮೀ, ಸಿಂಗಸಂದ್ರ 34 ಮಿ ಮೀ, ಬೊಮ್ಮನಹಳ್ಳಿ 30 ಮಿ ಮೀ, ಚುಂಚನಕುಪ್ಪೆ 26 ಮಿ ಮೀ ಮಳೆಯಾಗಿದೆ. ಉಳಿದೆಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

400 ಕ್ಕೂ ಹೆಚ್ಚು ಮರಗಳು ಧರಾಶಾಹಿ: ಬೆಂಗಳೂರಿನಲ್ಲಿ ಎರಡು ದಿನಗಳಿಂದ ಸುರಿದ ಆಲಿಕಲ್ಲು ಸಹಿತ ಮಳೆಗೆ ನಗರದಲ್ಲಿ 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 1,600 ಕ್ಕೂ ಅಧಿಕ ಮರಗಳ ಕೊಂಬೆ ಮುರಿದು ರಸ್ತೆಗೆ ಬಿದ್ದಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೂ ಅಡಚಣೆಯಾಯಿತು. ಕಬ್ಬನ್ ಪಾರ್ಕ್ ಒಂದರಲ್ಲಿಯೇ 50 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಐದು ದಿನ ಮಳೆ ಮುಂದುವರಿಕೆ:ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಕಾರಣದಿಂದ ಮುಂದಿನ 5 ದಿನ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಇದದನ್ನೂ ಓದಿ:ಮಳೆರಾಯನ ಅಟ್ಟಹಾಸಕ್ಕೆ ಬಹುತೇಕ ಜಮೀನನಲ್ಲಿ ಬೆಳೆ ನಾಶ: ದುಃಖಿತರಾದ ಕಾಡಂಚಿನ ಜನ

Last Updated : May 23, 2023, 8:14 AM IST

ABOUT THE AUTHOR

...view details