ಕರ್ನಾಟಕ

karnataka

ಬೈಕ್‌ನಲ್ಲಿ ಬಂದ ಗ್ಯಾಂಗ್‌ವೊಂದು ಚಾಕುವಿನಿಂದ ಇರಿದು ಯುವಕನ ಕೊಲೆ.. ವಿಡಿಯೋ ವೈರಲ್​

By

Published : Sep 20, 2021, 9:45 PM IST

ಘಟನೆ ಸಂಬಂಧ ಎಸ್ಪಿ ಡಾ.ಕೋನವಂಶಿ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದೆಂದು ತಿಳಿಸಿದ್ದಾರೆ. ಘಟನೆಯ ಕುರಿತಾದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..

youth died
ಯುವಕ ಸಾವು​​

ನೆಲಮಂಗಲ :ಬೈಕ್​​ನಲ್ಲಿ ಬಂದ ಗ್ಯಾಂಗ್​​ವೊಂದು ನಡುರಸ್ತೆಯಲ್ಲೇ ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ವೈರಲ್​ ವಿಡಿಯೋ

ಸುಭಾಷ್ ನಗರದ ಟಿಬಿ ಬಸ್ ನಿಲ್ದಾಣದಲ್ಲಿ ರೇವಂತ್ ಅಲಿಯಾಸ್ ಸೃಷ್ಟಿ ಎಂಬಾತನ ಮೇಲೆ ಬೈಕಿನಲ್ಲಿ ಬಂದ ಯುವಕರ ಗುಂಪು ಹಲ್ಲೆ ಮಾಡಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದೆ. ಕೂಡಲೇ ಸ್ಥಳೀಯರು ಗಾಯಗೊಂಡಿದ್ದ ಯುವಕನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಯುವಕ ಬದುಕುಳಿದಿಲ್ಲ.

ಘಟನೆ ಸಂಬಂಧ ಎಸ್ಪಿ ಡಾ.ಕೋನವಂಶಿ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದೆಂದು ತಿಳಿಸಿದ್ದಾರೆ. ಘಟನೆಯ ಕುರಿತಾದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಬೆಂಗಳೂರು ಆತ್ಮಹತ್ಯೆಯ ಡೆತ್‌ನೋಟ್‌: ಅಪ್ಪನ ರಾಸಲೀಲೆ, ದೌರ್ಜನ್ಯಗಳನ್ನು ಇಂಚಿಂಚೂ ವಿವರಿಸಿದ ಮಕ್ಕಳು!

ABOUT THE AUTHOR

...view details