ಕರ್ನಾಟಕ

karnataka

ETV Bharat / state

ಉರಿತಿರೋ ಬೆಂಕಿಗೆ ಕಾಂಗ್ರೆಸ್​​​ ಪೆಟ್ರೋಲ್​​​ ಸುರಿಯುವ ಕೆಲಸ ಮಾಡಬಾರದು: ಡಿವಿಎಸ್​​ - Union Minister DVS press conference

ಯಾವುದೇ ಕಾಂಗ್ರೆಸ್​ ನಾಯಕರು ಪೆಟ್ರೋಲ್​ ಸುರಿಯುವ ಕೆಲಸ ಮಾಡಬಾರದು. ಮಂಗಳೂರಿಗೆ ನಿಯೋಗ ತೆರಳಲು ಇದು ಸಕಾಲ ಅಲ್ಲ. ಇದರಿಂದ ಪುಡಾರಿಗಳು ಮತ್ತೆ ಗಲಭೆ ಹೆಚ್ಚಿಸುತ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Union Minister DVS press conference
ಕೇಂದ್ರ ಸಚಿವ ಡಿವಿಎಸ್

By

Published : Dec 20, 2019, 12:57 PM IST

ಬೆಂಗಳೂರು:ಕಾಂಗ್ರೆಸ್ ನಾಯಕರು ಮಂಗಳೂರಿಗೆ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು. ಈ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ, ಜಮೀರ್ ಅಹ್ಮದ್​ ಮಂಗಳೂರಿಗೆ ನಿಯೋಗ ಹೋಗುವುದು ಕೆಲ ಪುಡಾರಿಗಳಿಗೆ ಮತ್ತೆ ಗಲಭೆಗೆ ಪ್ರಚೋದನೆ ನೀಡಿದಂತೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ದಕ್ಷಿಣ ಕನ್ನಡದ ಕಾಂಗ್ರೆಸ್​ ನಾಯಕರಿಗೆ ಶಾಂತಿ ಕಾಪಾಡಲು ಹೇಳಿ. ಇನ್ನು ಜಿಲ್ಲೆಯಲ್ಲಿ ಶಾಂತಿ ನೆಲೆಸಿದ ನಂತರ ಹೋಗಿ ಎಂದು ಹೇಳಿದರು.

ಕಾಂಗ್ರೆಸ್​ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕಾಗಿಯೇ ಈ ರೀತಿಯ ಪ್ರಚೋದನೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.

ABOUT THE AUTHOR

...view details