ಕರ್ನಾಟಕ

karnataka

ETV Bharat / state

ಯುಗಾದಿ ಹಬ್ಬದಂದು ಮುಜರಾಯಿ ದೇವಾಲಯಗಳಲ್ಲಿ 'ಧಾರ್ಮಿಕ ದಿನಾಚರಣೆ'ಗೆ ಸೂಚನೆ - ಯುಗಾದಿ ಹಬ್ಬದಂದು ಧಾರ್ಮಿಕ ದಿನಾಚರಣೆಗೆ ಸೂಚನೆ

ಯುಗಾದಿ ದಿನ ಬೆಳಗ್ಗೆ ದೇವರಿಗೆ ವಿಶೇಷ ಸಂಕಲ್ಪನೆ, ಪ್ರಾರ್ಥನೆ ಮೂಲಕ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ ಬೇವು ಬೆಲ್ಲ ವಿತರಿಸಬೇಕು. ಪ್ರಸಿದ್ಧ ಜ್ಯೋತಿಷಿಗಳಿಂದ ಪಂಚಾಂಗ ಶ್ರವಣ ಮಾಡಿಸಿ, ಪೂಜೆಯ ನಂತರ ಸಿಹಿ ಪ್ರಸಾದಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಹಂಚಬೇಕು ಎಂದು ಮುಜರಾಯಿ‌ ಇಲಾಖೆ ತಿಳಿಸಿದೆ.

ugadi-is-celebrated-as-religious-day-in-temples
ಯುಗಾದಿ ಹಬ್ಬದಂದು ಮುಜರಾಯಿ ದೇವಾಲಯಗಳಲ್ಲಿ 'ಧಾರ್ಮಿಕ ದಿನಾಚರಣೆ'ಗೆ ಸೂಚನೆ

By

Published : Apr 1, 2022, 3:30 PM IST

ಬೆಂಗಳೂರು:ಮುಜರಾಯಿ‌ ಇಲಾಖೆ ವ್ಯಾಪ್ತಿಯ ಜಿಲ್ಲಾವಾರು 'ಎ' ಪ್ರವರ್ಗದ ದೇವಾಲಯಗಳಲ್ಲಿ ವಿಶೇಷವಾಗಿ ಯುಗಾದಿ ಹಬ್ಬ ಆಚರಿಸಲು ಸೂಚಿಸಲಾಗಿದೆ. ಈ ಸಂಬಂಧ‌ ಮುಜರಾಯಿ ಸಚಿವೆ ವಿಡಿಯೋ ಕಾನ್ಫರೆನ್ಸ್ ಮಾಡಿ, ರಾಜ್ಯದ ಜಿಲ್ಲಾವಾರು ಪ್ರಸಿದ್ಧ 3 ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ವಿಶೇಷವಾಗಿ ಪೂಜೆ, ಪ್ರಾರ್ಥನೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ದೇಶಿಸಲಾಗಿದೆ.

ದೇವಾಲಯದ ಮುಂಭಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 'ಧಾರ್ಮಿಕ ದಿನಾಚರಣೆ' ಎಂಬ ಬಗ್ಗೆ, ಬ್ಯಾನರ್‌, ನಾಮಫಲಕ (ಬೋರ್ಡ್) ಅಳವಡಿಸಬೇಕು. ದೇವಾಲಯದ ಮುಂಭಾಗದಲ್ಲಿ ಕಮಾನಿನಲ್ಲಿ (ಆರ್ಚ್) ರೀತಿಯಲ್ಲಿ ದೇವಾಲಯದ ಹೆಸರಿನೊಂದಿಗೆ 'ರಾಜ್ಯ ಧಾರ್ಮಿಕ ದಿನಾಚರಣೆ' ಎಂದು ವಿಶೇಷವಾಗಿ ನಮೂದಿಸುವಂತೆ ಸೂಚನೆ ನೀಡಲಾಗಿದೆ.

ಯುಗಾದಿ ದಿನ ಬೆಳಗ್ಗೆ ದೇವರಿಗೆ ವಿಶೇಷ ಸಂಕಲ್ಪನೆ, ಪ್ರಾರ್ಥನೆ ಮೂಲಕ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ ಬೇವು ಬೆಲ್ಲ ವಿತರಿಸಬೇಕು. ಪ್ರಸಿದ್ಧ ಜ್ಯೋತಿಷಿಗಳಿಂದ ಪಂಚಾಂಗ ಶ್ರವಣ ಮಾಡಿಸಿ, ಪೂಜೆಯ ನಂತರ ಸಿಹಿ ಪ್ರಸಾದಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಹಂಚಬೇಕು. ದೇವಾಲಯಗಳಲ್ಲಿ ಬೆಳಗ್ಗೆ/ಸಂಜೆ ಹರಿಕಥೆ, ಭಜನೆ, ಪ್ರಾರ್ಥನೆ, ಸುಗಮ ಸಂಗೀತ, ಭರತನಾಟ್ಯ ಮತ್ತು ಮುಂತಾದ ಸ್ಥಳೀಯವಾಗಿ ಲಭ್ಯವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚಿಸಲಾಗಿದೆ.

ಕನಿಷ್ಠ 5 ಬೇವಿನ ಸಸಿ (ಗಿಡ)ಗಳನ್ನು ನಡಲು ಸೂಕ್ತ ವ್ಯವಸ್ಥೆ ಮಾಡಿಸಬೇಕು. ಸ್ಥಳೀಯ ಶಾಸಕರು ಮತ್ತು ಪ್ರತಿನಿಧಿಗಳನ್ನು ಆಹ್ವಾನಿಸಿ, ಕಾರ್ಯಕ್ರಮಗಳನ್ನು ವಿಶೇಷವಾಗಿ ನಡೆಸಬೇಕು. ದೇವಾಲಯದ ಸಮೀಪವಿರುವ ವಿವಿಧ ಧರ್ಮಗಳ ಮಠಾಧೀಶರನ್ನು ಆಹ್ವಾನಿಸಿ ಅವರಿಂದ ಯುಗಾದಿ ಹಬ್ಬದ ಬಗ್ಗೆ ಭಕ್ತರಿಗೆ ಪ್ರವಚನ ಮಾಡಿಸಬೇಕು ಎಂದು ಹೇಳಲಾಗಿದೆ.‌

ಯುಗಾದಿ ದಿನದಂದು ಸಂಜೆ 4ರಿಂದ 6.30 ಗಂಟೆಯೊಳಗೆ ಗೋದೂಳಿ ಲಗ್ನದಲ್ಲಿ ಹಸು, ಎತ್ತುಗಳಿಗೆ ಮತ್ತು ಉಳುಮೆ ಮಾಡುವ ನೇಗಿಲು, ನೊಗಗಳನ್ನು ವಿಶೇಷವಾಗಿ ಪೂಜಿಸಿ ಅಲಂಕರಿಸಿ ಹೊಸದಾಗಿ ಉಳುಮೆ ಪ್ರಾರಂಭಿಸಲು 'ಹೊನ್ನಾರು' ಮಾಡಲು ಹತ್ತಾರು ಜೋಡಿ ಹಸುಗಳು ಎತ್ತುಗಳು ನೇಗಿಲು, ರೈತ ಮುಂತಾದವುಗಳ ವ್ಯವಸ್ಥೆಯನ್ನು ಮಾಡಿ ಸಾಲಾಗಿ ಸಾಲಾಗಿ ಉಳುಮೆ ಮಾಡುವ ವ್ಯವಸ್ಥೆ ಮಾಡಿಸುವಂತೆ ಸೂಚಿಸಲಾಗಿದೆ. ಈ ಕಾರ್ಯಕ್ರಮಗಳನ್ನು ನಡೆಸಿದ ಬಗ್ಗೆ ಚಿಕ್ಕದಾಗಿ ವಿಡಿಯೋ ಮತ್ತು ಭಾವಚಿತ್ರ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲು ತಿಳಿಸಲಾಗಿದೆ.

ಇದನ್ನೂ ಓದಿ:ಪೋಷಕರ ಬಂಧನದಲ್ಲಿದ್ದ ಯುವತಿ: ಪ್ರೇಯಸಿ ಅಲ್ಲಿಂದ ಓಡಿಸಿಕೊಂಡು ಬಂದು ಮದುವೆಯಾದ ಪ್ರಿಯಕರ

ABOUT THE AUTHOR

...view details