ಕರ್ನಾಟಕ

karnataka

ETV Bharat / state

ಜಾಮೀನು ಕೊಡಿಸಿದ ವಕೀಲರಿಗೆ ಫೀಸ್​​​​ ಕಟ್ಟಲು ಮತ್ತೆ ಕಳ್ಳತನ: ಖದೀಮರು ಅಂದರ್​​​​​!

ವಕೀಲರ ಫೀಸ್ ಕಟ್ಟಲು ಮತ್ತೆ ಕಳ್ಳತನಕ್ಕಿಳಿದ ಖದೀಮರನ್ನು ಬೆಂಗಳೂರಿನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

By

Published : Aug 2, 2019, 2:05 PM IST

thieves

ಬೆಂಗಳೂರು:ಕಳ್ಳತನ ಪ್ರಕರಣದಲ್ಲಿ ಜಾಮೀನು ಕೊಡಿಸಿದ ವಕೀಲರ ಫೀಸ್ ಕಟ್ಟಲು ಮತ್ತೆ ಕಳ್ಳತನಕ್ಕಿಳಿದ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಸಯ್ಯದ್ ಇಮ್ರಾನ್ ಅಲಿಯಾಸ್​ ಕಾಲು, ವಸೀಮ್ ಅಕ್ರಮ್ ಅಲಿಯಾಸ್​ ಬ್ಲೇಡ್ ವಸೀಮ್ ಎಂಬುರವನ್ನು ಮನೆಗಳ್ಳತನ ಆರೋಪದ ಮೇಲೆ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳಿಬ್ಬರು ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಸೇರಿದ್ರು. ಆಗ ಇವರಿಗೆ ವಕೀಲರೊಬ್ಬರು ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ರು. ವಕೀಲರಿಗೆ ಋಣವಾಗಿ ಫೀಸ್​ ಕಟ್ಟಲಾಗದೆ, ಇಬ್ಬರೂ ಮತ್ತೆ ಕಳ್ಳನತಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲ, ಆಡುಗೋಡಿ, ತಿಲಕ್‌ನಗರ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ‌ ಮನೆಗಳ್ಳತನ ಮಾಡಿ, ಅದರಿಂದ ಬಂದ ಹಣದಲ್ಲಿಯೇ ವಕೀಲರ ಫೀಸ್​ ಕಟ್ಟಿದ್ದರು ಎಂದು ಹೇಳಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details