ಕರ್ನಾಟಕ

karnataka

ETV Bharat / state

ಕೊಟ್ಟ ಹಣ ಕೇಳಲು ಹೋದ ಯುವತಿಯನ್ನು ನಗ್ನಗೊಳಿಸಿದ ಪಾಪಿಗಳು... ಅತ್ಯಾಚಾರಕ್ಕೂ ಯತ್ನ! - bangaluru news

ಈಕೆ ವಿನೋದ್ ಹಾಗೂ ಹರೀಶ್ ಎಬುವವರಿಗೆ ಹಣ ನೀಡಿದ್ದರು. ಇದಾದ ನಂತರ ಸಾಲ ಕೊಟ್ಟ ಹಣವನ್ನ ಅವರ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ತೆಯನ್ನ ಈ ಇಬ್ಬರು ಆರೋಪಿಗಳು ಬಲವಂತವಾಗಿ ಕೂಡಿ ಹಾಕಿ, ನಗ್ನ ಗೊಳಿಸಿದ್ದಾರೆ.

ಕೊಟ್ಟ ಹಣ ಕೇಳಲೋದ ಯುವತಿಯನ್ನು ನಗ್ನಗೊಳಿಸಿದ ಪಾಪಿಗಳು

By

Published : Sep 5, 2019, 4:44 PM IST

ಬೆಂಗಳೂರು: ಸಾಲ ಕೊಟ್ಟ ಹಣವನ್ನ ವಾಪಸ್​ ಕೇಳಲು ಹೋದ ಯುವತಿಯನ್ನೇ ನಗ್ನ ಗೊಳಿಸಿರುವ ಅಮಾನವೀಯ ಹೇಯ ಕೃತ್ಯ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬಾಣಸಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತ್ರಸ್ತೆ ವಾಸವಾಗಿದ್ದು, ‌ವಿನೋದ್ ಹಾಗೂ ಹರೀಶ್ ಎಬುವವರಿಗೆ ಹಣ ನೀಡಿದ್ದರು. ಇದಾದ ನಂತರ ಸಾಲ ಕೊಟ್ಟ ಹಣವನ್ನ ವಿನೋದ್​ ಹಾಗೂ ಹರೀಶ್ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ತೆಯನ್ನ ಈ ಇಬ್ಬರು ಆರೋಪಿಗಳು ಬಲವಂತವಾಗಿ ಕೂಡಿ ಹಾಕಿ, ನಗ್ನ ಗೊಳಿಸಿದ್ದಾರೆ.

ಎಫ್​ಐಆರ್​

ಅಷ್ಟೇ ಅಲ್ಲದೇ, ಆಕೆಯನ್ನ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಯುವತಿ ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗೆ ಶೊಧ ಮುಂದುವರೆದಿದೆ.

ABOUT THE AUTHOR

...view details