ಕರ್ನಾಟಕ

karnataka

ETV Bharat / state

ರಮೇಶ್​ ನಿವಾಸದಲ್ಲಿ ಪಕ್ಷೇತರರು ಪ್ರತ್ಯಕ್ಷ: ಕುತೂಹಲ ಮೂಡಿಸಿದ 'ಬಂಡಾಯ'ದ ನಡೆ!

ಪಕ್ಷೇತರ ಶಾಸಕರಿಬ್ಬರು, ರಮೇಶ್​ ಜಾರಕಿಹೊಳಿ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದು ಬಂಡಾಯ ನಾಯಕರ ನಡೆ ಅಚ್ಚರಿಗೆ ಕಾರಣವಾಗಿದೆ.

By

Published : May 29, 2019, 1:34 PM IST

ರಮೇಶ್​ ನಿವಾದಲ್ಲಿ ಪಕ್ಷೇತರ ಶಾಸಕರು ಪ್ರತ್ಯಕ್ಷ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಕಾಣಿಸಿಕೊಂಡ ಪಕ್ಷೇತರ ಶಾಸಕ ನಾಗೇಶ್ ಮತ್ತು ಆರ್.ಶಂಕರ್ ತೀವ್ರ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟ್ರಸ್​ ನಲ್ಲಿ ರಮೇಶ್​ ಜಾರಕಿಹೊಳಿ​ ಭೇಟಿಯಾದ ಪಕ್ಷೇತರರಿಗೆ ಶಾಸಕ ಮಹೇಶ್ ಕುಮಠಳ್ಳಿ ಸಾಥ್ ನೀಡಿದ್ದಾರೆ.

ರಮೇಶ್​ ನಿವಾದಲ್ಲಿ ಪಕ್ಷೇತರ ಶಾಸಕರು ಪ್ರತ್ಯಕ್ಷ!

ನಿನ್ನೆ ಡಿ.ಕೆ.ಶಿವಕುಮಾರ್​ ಕಾಣಿಸಿಕೊಂಡ ಮುಳಬಾಗಿಲು ಶಾಸಕ ನಾಗೇಶ್ ಇಂದು ಮತ್ತೊಂದು ಪಾಳಯದಲ್ಲಿ ಕಾಣಿಸಿಕೊಂಡಿದ್ದು‌ ಕುತೂಹಲ ಕೆರಳಿಸಿದ್ದಾರೆ.
ಸಿದ್ದರಾಮಯ್ಯ ಜೊತೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದ ಆರ್.ಶಂಕರ್, ಇತ್ತ ಕುಮಾರ ಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿರುವ ಹೊತ್ತಲ್ಲೇ ರಮೇಶ್​ ನಿವಾಸದಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಜೊತೆಗೆ ಮೈತ್ರಿ ನಾಯಕರ ಎದೆಬಡಿತವನ್ನೂ ಮತ್ತಷ್ಟು ಹೆಚ್ಚಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details