ಕರ್ನಾಟಕ

karnataka

ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುವುದಾಗಿ ಹೇಳಿ ವಂಚಿಸಿದ ಇಬ್ಬರ ಬಂಧನ

ರಾಜಭವನದ ಅಧಿಕಾರಿಯ ಸೋಗಿನಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುತ್ತೇವೆಂದು ನಂಬಿಸಿ 1 ಲಕ್ಷ ರೂ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಸೆರೆ ಹಿಡಿದಿದ್ದಾರೆ.

By

Published : Aug 28, 2022, 6:47 AM IST

Published : Aug 28, 2022, 6:47 AM IST

ವಂಚನೆ
fraud case

ಬೆಂಗಳೂರು: ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುವುದಾಗಿ ಹೇಳಿ ವ್ಯಕ್ತಿಯನ್ನು ನಂಬಿಸಿ ಹಣ ಪಡೆದು ಮೋಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ಯಾನ್ ಪ್ರಕಾಶ್ (50), ಗಿರಿಧರ್ ಝಾ (37) ಬಂಧಿತರು.

ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುವುದಾಗಿ ತಿಳಿಸಿ, ಸಿನಿಮೀಯ ಶೈಲಿಯಲ್ಲಿ 1 ಲಕ್ಷ ರೂಪಾಯಿ ಪಡೆದು ಪೀಣ್ಯ ಕೈಗಾರಿಕಾ ಪ್ರದೇಶ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಆರ್.ವೆಂಕಟೇಶ್‌ಗೆ ಆರೋಪಿಗಳು ವಂಚಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು: ಚೀಟಿ ವ್ಯವಹಾರದಲ್ಲಿ ವಂಚನೆ, ರಸ್ತೆಯಲ್ಲಿ ಕುಳಿತು ಗೋಳಾಡಿದ ಮಹಿಳೆ

ರಾಜ್ಯಪಾಲರ ಕಚೇರಿಯೊಳಗೆ ಹೋಗಿ ಹೊರಬಂದಿದ್ದ: ವೆಂಕಟೇಶ್ ಅವರನ್ನು ರಾಜಭವನಕ್ಕೆ ಕರೆದುಕೊಂಡು ಹೋಗಿ ತಾವು ರಾಜಭವನದ ಅಧಿಕಾರಿಗಳು ಎನ್ನುವಂತೆ ನಟಿಸಿದ್ದಾರೆ. ರಾಜ್ಯಪಾಲರ ಕಚೇರಿಯೊಳಗೆ ಹೋಗಿ ಅರ್ಧಗಂಟೆಗಳ ಕಾಲ ಮಾತನಾಡಿದ ಆರೋಪಿ ಹೊರಬಂದಿದ್ದ. ಐಜೆಸಿ ಎಂಬ ಸಂಸ್ಥೆಯ ವತಿಯಿಂದ ರಾಜಭವನದಲ್ಲಿ ಥಾವರ್ ಚಂದ್ ಗೆಹ್ಲೋಟ್​ ಆಗಸ್ಟ್ 16 ರಂದು ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ನೀಡುತ್ತಾರೆ. ಈ ಪ್ರಶಸ್ತಿಯನ್ನು ಪಡೆಯಲು ನೀವು 1 ಲಕ್ಷ ರೂಪಾಯಿ ದೇಣಿಗೆ ಕೊಡಬೇಕಾಗುತ್ತದೆ ಎಂದು ವೆಂಕಟೇಶ್‌ಗೆ ಪರಿಚಿತರಾಗಿದ್ದ ಸುರೇಶ್ ಬಾಬು ದೂರವಾಣಿ ಮೂಲಕ ಸಂಪರ್ಕಿಸಿದ್ದ.

ಇದಕ್ಕೆ ವೆಂಕಟೇಶ್ ಒಪ್ಪಿಕೊಂಡಿದ್ದು, ಆ ನಂತರ ತಮ್ಮ ಸ್ನೇಹಿತರಾದ ಎ.ಆರ್.ನಾಗೇಶ್, ಸುರೇಶ್ ಬಾಬು ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಈ ಹಣವನ್ನು ಸುರೇಶ್ ಬಾಬು ಗ್ಯಾನ್ ಪ್ರಕಾಶ್​ಗೆ ನೀಡಿದ್ದೇನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸ್ವಾಮೀಜಿ ವೇಷದಲ್ಲಿ ಮೋಸಗೈದ ಆರೋಪಿ ಬಂಧನ

ನಕಲಿ ಪುರಸ್ಕಾರ ಪತ್ರ ಕೊಟ್ಟಿದ್ದ ಆರೋಪಿಗಳು: ಆಗಸ್ಟ್ 16 ರಂದು ವೆಂಕಟೇಶ್ ರಾಜಭವನಕ್ಕೆ ಬಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗ ಸತ್ಯಾಂಶ ತಿಳಿದು ಬಂದಿದೆ. ತಾನು ಮೋಸ ಹೋಗಿರುವುದು ಗೊತ್ತಾಗಿ ನಕಲಿ ಪುರಸ್ಕಾರ ಪತ್ರಗಳನ್ನು ನೀಡಿದ್ದಾರೆಂದು ಆರೋಪಿಸಿ ವೆಂಕಟೇಶ್ ಅವರು ಗ್ಯಾನ್ ಪ್ರಕಾಶ್ ಮತ್ತು ಗಿರಿಧರ್ ಝಾ ಎಂಬುವರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ದೂರಿನನ್ವಯ ವಿಧಾನಸೌಧ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಕೆಎಎಸ್ ಪರೀಕ್ಷೆ ಪಾಸಾಗಲು ಅಡ್ಡ ದಾರಿ ಹಿಡಿದ ಯುವತಿಗೆ 59 ಲಕ್ಷ ರೂಪಾಯಿ ವಂಚನೆ!

ABOUT THE AUTHOR

...view details