ಕರ್ನಾಟಕ

karnataka

ETV Bharat / state

ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲು ತೀರ್ಮಾನ - ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯ

ಏಕರೂಪದ ಚಿಕಿತ್ಸಾ ಪದ್ಧತಿ, ಟೆಸ್ಟ್, ಕೌನ್ಸೆಲಿಂಗ್, ನಿಗಾ, ಹಾಸಿಗೆ ಲಭ್ಯತೆ-ಹಂಚಿಕೆ, ಔಷಧ ದಾಸ್ತಾನು-ವಿತರಣೆ, ನಾನಾ ಆ್ಯಪ್‌ಗಳ ಬಳಕೆ, ಟೆಲಿ ಐಸಿಯು ಹಾಗೂ ಇತರೆ ವಿಷಯಗಳ ಜೊತೆ ಪ್ರಮುಖವಾಗಿ ನಾನಾ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಂಡು ನಿರ್ದಿಷ್ಟ ಹೊಣೆಗಾರಿಕೆ ಹಂಚಿಕೆ ಕುರಿತಂತೆ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು..

ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲು ತೀರ್ಮಾನ
ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲು ತೀರ್ಮಾನ

By

Published : Jan 7, 2022, 7:42 PM IST

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಸರ್ಕಾರಿ ಕಚೇರಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಸಭೆಯಲ್ಲಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ತಜ್ಞರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಾನಾ ವಿಭಾಗಗಳ ಮುಖ್ಯಸ್ಥರು, ರಾಜ್ಯ ಕೋವಿಡ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಏಕರೂಪದ ಚಿಕಿತ್ಸಾ ಪದ್ಧತಿ, ಟೆಸ್ಟ್, ಕೌನ್ಸೆಲಿಂಗ್, ನಿಗಾ, ಹಾಸಿಗೆ ಲಭ್ಯತೆ-ಹಂಚಿಕೆ, ಔಷಧ ದಾಸ್ತಾನು-ವಿತರಣೆ, ನಾನಾ ಆ್ಯಪ್‌ಗಳ ಬಳಕೆ, ಟೆಲಿ ಐಸಿಯು ಹಾಗೂ ಇತರೆ ವಿಷಯಗಳ ಜೊತೆ ಪ್ರಮುಖವಾಗಿ ನಾನಾ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಂಡು ನಿರ್ದಿಷ್ಟ ಹೊಣೆಗಾರಿಕೆ ಹಂಚಿಕೆ ಕುರಿತಂತೆ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಶಾಪಿಂಗ್‌ ಮಾಲ್, ಥಿಯೇಟರ್, ಹೋಟೆಲ್, ಮೆಟ್ರೋಗಳಲ್ಲೂ ಈ ಎರಡು ಡೋಸ್ ಕಡ್ಡಾಯ ನೀತಿ ಅಳವಡಿಸಲು ಸೂಚನೆ ನೀಡಲಾಗುವುದು. ಈ ಸಂಬಂಧ ಯೂನಿವರ್ಸಲ್ ಪಾಸ್ ಮಾಡಿಸಲು ಚಿಂತನೆ ಇದೆ. ಈ ಬಗ್ಗೆ ಐಟಿ ಕಂಪನಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಪಾದಯಾತ್ರೆಯಿಂದ ಮೇಕೆದಾಟು ಯೋಜನೆ ಆಗುವುದಾದ್ರೆ ಕಾಂಗ್ರೆಸ್‌ಗೆ ಬೆಂಬಲ: ಹೆಚ್​ಡಿಕೆ

ಮನೆಯಲ್ಲಿ ಮೂರು ಪ್ರಕರಣ ಕಂಡು ಬಂದ್ರೆ, ಮೈಕ್ರೋ ಕಂಟೈನ್ಮೆಂಟ್ ಝೋನ್ ಅಂತಾ ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಸರಿಯಾದ ಮಾಹಿತಿ, ಸೂಕ್ತ ವ್ಯಕ್ತಿಯಿಂದ ಮಾಹಿತಿ ಹೋಗಬೇಕು.

ಅದಕ್ಕಾಗಿ ಪ್ಯಾನಲ್ ಮೆಂಬರ್ ಅಂತಾ ಅಧಿಕೃತವಾಗಿ ವೈದ್ಯರ ನೇಮಕ‌ ಮಾಡಲು ನಿರ್ಧರಿಸಲಾಗಿದೆ. ಅವರ ಸಂಪರ್ಕ ನಂಬರ್ ನೀಡಲಾಗುವುದು. ಅವರಿಂದಲೇ ಮಾಧ್ಯಮಗಳು ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.

ಸೋಮವಾರದಿಂದ ಪ್ರತೀ ದಿನ 5 ಗಂಟೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಅದರ ಮಾಹಿತಿಯನ್ನು ಆರೋಗ್ಯ ಸಚಿವರು ಅಥವಾ ಅಧಿಕಾರಿಗಳು ದಿನನಿತ್ಯ ಸುದ್ದಿಗೋಷ್ಠಿ ಮಾಡಿ ಬಿಡುಗಡೆ‌ ಮಾಡಲಿದ್ದಾರೆ. ಸಮಾಜದ ಗಣ್ಯ ವ್ಯಕ್ತಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸೋ ಆಡಿಯೋ, ವಿಡಿಯೋ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹೋಗಬಾರದು. ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಎಚ್ಚರಿಸಿದರು.

ABOUT THE AUTHOR

...view details