ಕರ್ನಾಟಕ

karnataka

ETV Bharat / state

ತೀವ್ರಗೊಂಡ ಅಮೂಲ್ಯ ವಿಚಾರಣೆ: ಬಸವೇಶ್ವರ ಠಾಣೆಗೆ ಬಂದ ಇಬ್ಬರು ಡಿಸಿಪಿಗಳು - Latest news in bangalore basaveshwar police station

ಟೌನ್ ಹಾಲ್ ಮುಂದೆ ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರ್ದ್ರಾ ಹಾಗೂ‌ ಪಾಕ್ ಪರ ಜಿಂದಾಬಾದ್ ಕೂಗಿದ್ದ ಅಮೂಲ್ಯ ಲಿಯೋನ್​​ ಇಬ್ಬರೂ ಸ್ನೇಹಿತೆಯರಂತೆ. ಹೀಗಾಗಿ ಕೇಂದ್ರ ವಿಭಾಗದ ಡಿಸಿಪಿ ನೇರವಾಗಿ ಅಮೂಲ್ಯ ಹೇಳಿಕೆ‌ ಪಡೆಯಲು ಆಗಮಿಸಿದ್ದಾರೆ.

two-dcps-arrived-at-basaveshwara
ತೀವ್ರಗೊಂಡ ಅಮೂಲ್ಯ ವಿಚಾರಣೆ

By

Published : Feb 28, 2020, 7:40 PM IST

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ನಗರ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿ ನೀಡಿದ್ದಾರೆ‌.‌

ಟೌನ್ ಹಾಲ್ ಮುಂದೆ ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರ್ದ್ರಾ ಹಾಗೂ‌ ಪಾಕ್ ಪರ ಜಿಂದಾಬಾದ್ ಕೂಗಿದ್ದ ಅಮೂಲ್ಯ ಲಿಯೋನ್​ ಇಬ್ಬರು ಸ್ನೇಹಿತೆಯರಂತೆ. ಹೀಗಾಗಿ ಕೇಂದ್ರ ವಿಭಾಗದ ಡಿಸಿಪಿ ನೇರವಾಗಿ ಅಮೂಲ್ಯ ಹೇಳಿಕೆ‌ ಪಡೆಯಲು ಆಗಮಿಸಿದ್ದಾರೆ.

ತೀವ್ರಗೊಂಡ ಅಮೂಲ್ಯ ವಿಚಾರಣೆ

ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟರ್ ಪ್ರದರ್ಶಿಸಿರುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ನಡೆದ ಪ್ರತಿಭಟನೆಯಲ್ಲಿ ಅಮೂಲ್ಯ ಪಾತ್ರದ ಶಂಕೆ ವ್ಯಕ್ತವಾಗಿದ್ದು, ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಹಾಗೂ ತಂಡ ವಿಚಾರಣೆಗೆ ಒಳಪಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಠಾಣೆ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ABOUT THE AUTHOR

...view details