ಕರ್ನಾಟಕ

karnataka

ಹೈಕೋರ್ಟ್ ಅದೇಶದಿಂದ ಎಚ್ಚೆತ್ತ ಸಾರಿಗೆ ನೌಕರರು: ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರು

By

Published : Apr 21, 2021, 2:27 PM IST

ಮುಷ್ಕರನಿರತ ಸಾರಿಗೆ ನೌಕರರ ಪೈಕಿ ಹೆಚ್ಚಿನವರು ಕರ್ತವ್ಯಕ್ಕೆ ಮರಳಿದ್ದಾರೆ. ಇಂದು ರಾಜ್ಯಾದ್ಯಂತ 10 ಸಾವಿರಕ್ಕೂ ಅಧಿಕ ಬಸ್​ಗಳು ರಸ್ತೆಗಳಿದಿವೆ. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಹೈಕೊರ್ಟ್ ನಿನ್ನೆ ಸೂಚನೆ ನೀಡಿತ್ತು.

Transport workers returned to duty after the HC order
ಕರ್ತವ್ಯಕ್ಕೆ ಮರಳುತ್ತಿರುವ ಸಾರಿಗೆ ನೌಕರರು

ಬೆಂಗಳೂರು: ಹೈಕೋರ್ಟ್​ ಆದೇಶದಿಂದ ಎಚ್ಚೆತ್ತುಕೊಂಡಿರುವ ಮುಷ್ಕರನಿರತ ಸಾರಿಗೆ ನೌಕರರು ಒಬ್ಬೊಬ್ಬರಾಗಿಯೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಕಳೆದ ದಿನಗಳಿಗೆ ಹೋಲಿಸಿದರೆ‌ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ. ಮೆಜೆಸ್ಟಿಕ್​ನ‌ ಬಿಎಂಟಿಸಿ ಹಾಗೂ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಸ್​ಗಳು ಆಗಮಿಸುತ್ತಿವೆ.

ಇದನ್ನೂಓದಿ: ಸಾರಿಗೆ ನೌಕರರ ಮುಷ್ಕರ ಈ ಹಂತದಲ್ಲಿ ಸಮಂಜಸವಲ್ಲ, ಕೂಡಲೇ ಸೇವೆ ಆರಂಭಿಸಿ: ಹೈಕೋರ್ಟ್

ಸಾರಿಗೆ ನೌಕರರ ಮುಷ್ಕರ ವಾಪಸ್ ಸಂಬಂಧ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಆದರೆ, ಮುಷ್ಕರ ಅಂತ್ಯವಾಗುವ ಮುನ್ನವೇ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿರುವ ನೌಕರ ಒಕ್ಕೂಟದ ಮುಖಂಡರು ಮುಷ್ಕರ ಅಂತ್ಯವಾಗುತ್ತೋ, ಮುಂದುವರೆಯುತ್ತೋ ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಮಧ್ಯಾಹ್ನ 1 ಗಂಟೆ ತನಕ 10 ಸಾವಿರ ಬಸ್​ಗಳ ಓಡಾಟ:ಇಂದು ಮಧ್ಯಾಹ್ನ 1 ಗಂಟೆ ತನಕ ನಾಲ್ಕು ನಿಗಮಗಳಿಂದ 10 ಸಾವಿರಕ್ಕೂ ಹೆಚ್ಚು ಬಸ್​ಗಳು ಓಡಾಟ ನಡೆಸಿವೆ.‌ ಕೆಎಸ್​ಆರ್​ಟಿಸಿಯಿಂದ 3,751, ಬಿಎಂಟಿಸಿಯಿಂದ 2,318, ಎನ್ಇಕೆಆರ್​ಟಿಸಿಯಿಂದ 1,748, ಎನ್​ಡಬ್ಲ್ಯುಕೆಆರ್​ಟಿಸಿಯಿಂದ-2,267 ಬಸ್​ಗಳ ಸೇರಿ ಒಟ್ಟು 10,084 ಬಸ್​ಗಳು ರಸ್ತೆಗಿಳಿದಿವೆ.

ABOUT THE AUTHOR

...view details