ಕರ್ನಾಟಕ

karnataka

By

Published : Apr 19, 2021, 11:52 AM IST

Updated : Apr 19, 2021, 12:30 PM IST

ETV Bharat / state

ಉಪವಾಸ ಸತ್ಯಾಗ್ರಹಕ್ಕೆ ಮುಂದಾದವರು ಪೊಲೀಸ್​ ವಶಕ್ಕೆ.....ಜೈಲಿನಲ್ಲೇ ಇದ್ದು ಸಾಯುತ್ತೇವೆಂದ ಸಾರಿಗೆ ನೌಕರರು

ಸರ್ಕಾರದ ವಿರುದ್ಧ ಸಮರ ಸಾರಿರುವ ಸಾರಿಗೆ ನೌಕರರು ಇಂದು ಉಪವಾಸ ಸತ್ಯಾಗ್ರಕ್ಕೆ ಮುಂದಾಗಿದ್ದರು. ಆದರೆ, ಇದಕ್ಕೆ ಅವಕಾಶ ನೀಡದ ಪೊಲೀಸರು ನೌಕರರ ಒಕ್ಕೂಟದ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

Transport workers called for Hunger Stri
ಉಪವಾಸ ಸತ್ಯಾಗ್ರಕ್ಕೆ ಮುಂದಾದವರನ್ನು​ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು : ಪಟ್ಟು ಬಿಡದೆ ಸಾರಿಗೆ ನೌಕರರು ಮುಷ್ಕರ ಮುಂದುವರೆದಿದ್ದು, ಇತ್ತ ಕೋಡಿಹಳ್ಳಿ ಚಂದ್ರಶೇಖರ್ ಕಚೇರಿಗೆ ನುಗ್ಗಿದ ಪೊಲೀಸರು ಮುಷ್ಕರಕ್ಕೆ ಮುಂದಾಗಿದ್ದ ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದ ಸಾರಿಗೆ ನೌಕರರನ್ನು ಹತ್ತಿಕ್ಕಲು, ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮತ್ತು ಜಂಟಿ ಕಾರ್ಯದರ್ಶಿ ಆನಂದ್ ಸೇರಿದಂತೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಪವಾಸ ಸತ್ಯಾಗ್ರಹಕ್ಕೆ ಮುಂದಾದವರನ್ನು​ ವಶಕ್ಕೆ ಪಡೆದ ಪೊಲೀಸರು

ಓದಿ : ಮುಷ್ಕರದ ಪರಿಣಾಮ: ಈಶಾನ್ಯ ಸಾರಿಗೆ ಸಂಸ್ಥೆಗೆ 59 ಕೋಟಿ ರೂ.ನಷ್ಟ

ಈ ವೇಳೆ ಮಾತನಾಡಿದ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಸರ್ಕಾರದ ಈ ದೌರ್ಜನ್ಯವನ್ನು ಖಂಡಿಸುತ್ತೇವೆ. ನಾಳೆಯಿಂದ ಜೈಲು ಬರೋ ಚಳವಳಿ ಆರಂಭಿಸುತ್ತೇವೆ. ಯಾವುದೇ ಕಾರಣಕ್ಕೂ ಇಂದು ಕರೆ ಕೊಟ್ಟಿರುವ ಉಪವಾಸ ಸತ್ಯಾಗ್ರಹ ವಾಪಸ್​ ಪಡೆಯುವುದಿಲ್ಲ. ಜೈಲಿನಲ್ಲೇ ಉಪವಾಸ ಮಾಡಿ ಸಾಯುತ್ತೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Last Updated : Apr 19, 2021, 12:30 PM IST

ABOUT THE AUTHOR

...view details